Saturday, May 18, 2024

ಪ್ರಾಯೋಗಿಕ ಆವೃತ್ತಿ

ಶ್ರೀರಂಗಪಟ್ಟಣ| ಆಂಜನೇಯಸ್ವಾಮಿ ಮಾಲಾಧಾರಣೆ: ಸಂಕೀರ್ತನಾ ಯಾತ್ರೆ

ಹಿಂದೂ ಜಾಗರಣಾ ವೇದಿಕೆ ವತಿಯಿಂದ ಮೂಡಲಬಾಗಿಲು ಆಂಜನೇಯಸ್ವಾಮಿ ಮಾಲಾಧಾರಣೆ ಸಂಕೀರ್ತನಾ ಯಾತ್ರೆಯೂ ಡಿ.17ರಿಂದ ಡಿ.24ರವರೆಗೆ ನಡೆಯಲಿದೆ ಎಂದು ವೇದಿಕೆಯ ಮಂಡ್ಯ ಜಿಲ್ಲಾ ಸಂಚಾಲಕ ಮಾರ್ಕಡೇಯ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋ‍ಷ್ಠಿಯಲ್ಲಿ ಅವರು, ಡಿ.17ರಿಂದ ಮಾಲಾಧಾರಣೆ ನಡೆಯಲಿದ್ದು, ಡಿ.24ರಂದು ಮಲಾಧಾರಿಗಳಿಂದ ಬೃಹತ್ ಸಂಕೀರ್ತನ ಯಾತ್ರೆಯೂ ನಿಮಿಷಾಂಭ ದೇವಸ್ಥಾನದಿಂದ ಶ್ರೀರಂಗನಾಥ ದೇವಸ್ಥಾನದವರೆಗೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಸಾವಿರಾರು ಮಾಲಾಧಾರಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ಹೇಳಿದರು.

ಗೋಷ್ಠಿಯಲ್ಲಿ ವೇದಿಕೆಯ ಯೋಗಾನಂದ್, ಶ್ಯಾಮ ಸುಂದರ್ ಹಾಗೂ ಸೃಜನ್ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!