Wednesday, May 22, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ | ಜಿಲ್ಲಾ ಸಹಕಾರಿ ಮುದ್ರಣ ಮತ್ತು ಪ್ರಕಾಶನಾಲಯ ಉಪಾಧ್ಯಕ್ಷರಾಗಿ ಶಶಿಧರ್ ಆಯ್ಕೆ

ಮಂಡ್ಯದ ಅಶೋಕ ನಗರದಲ್ಲಿರುವ ಸಹಕಾರ ರಜತ ಭವನದಲ್ಲಿ ಮಂಡ್ಯ ಜಿಲ್ಲಾ ಸಹಕಾರಿ ಮುದ್ರಣ ಮತ್ತು ಪ್ರಕಾಶನಾಲಯ ನಿಯಮಿತ ಆಡಳಿತ ಮಂಡಳಿಯ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದು ಕೆ ಆರ್ ಪೇಟೆ ತಾಲೂಕಿನ ಶಶಿಧರ್ ಸಂಗಾಪುರ ಅವರು ಅವಿರೋಧವಾಗಿ ಆಯ್ಕೆಯಾದರು.

ಸಂಘದ ಆಡಳಿತ ಮಂಡಳಿಯಲ್ಲಿ ಒಟ್ಟು 16 ಮಂದಿ ನಿರ್ದೇಶಕರಿದ್ದು ತೆರವಾಗಿದ್ದ ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಒಂದು ನಾಮಪತ್ರ ಸಲ್ಲಿಕೆಯಾಗಿ ನಾಮಪತ್ರ ಸಲ್ಲಿಸಿದ್ದ ಶಶಿಧರ್ ಸಂಗಾಪುರ ಅವರು ಅವಿರೋಧ ಆಯ್ಕೆಯಾದರು.

ಶಶಿಧರ ಸಂಗಾಪುರ ಮಾತನಾಡಿ, ಜಿಲ್ಲಾ ಸಹಕಾರಿ ಮುದ್ರಣ ಮತ್ತು ಪ್ರಕಾಶನಾಲಯ ನಿಯಮಿತ ಆಡಳಿತ ಮಂಡಳಿಯ ಅಧ್ಯಕ್ಷರು ಮತ್ತು ಎಲ್ಲ ನಿರ್ದೇಶಕರ ಸಹಕಾರ ದೊಂದಿಗೆ ಸಂಘವನ್ನು ಅಭಿವೃದ್ಧಿಪಡಿಸ ಲಾಗುವುದು ಮುಂದಿನ ದಿನಗಳಲ್ಲಿ ಉತ್ತಮ ಆಡಳಿತ ನೀಡುವ ಭರವಸೆ ನಮ್ಮಲ್ಲಿದೆ ಎಂದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಸಹಕಾರಿ ಮುದ್ರಣ ಮತ್ತು ಪ್ರಕಾಶನಾಲಯ ನಿಯಮಿತ ಆಡಳಿತ ಮಂಡಳಿಯ ಅಧ್ಯಕ್ಷ ಬಿ.ಡಿ ಪುರುಷೋತ್ತಮ್, ನಿರ್ದೇಶಕರಾದ ಎಸ್. ನಾಗೇಂದ್ರ, ಬೇಲೂರು ಸೋಮಶೇಖರ್, ಎ.ಎಚ್ ರಮೇಶ್, ಕೆ.ಎಂ ಗುರುಸ್ವಾಮಿ,  ಸಿ.ದೇವರಾಜು, ಸುಗ್ಗಿಕೆಂಚಪ್ಪ, ಎನ್ ದಾಸೇಗೌಡ,  ಬಿ ಚೌಡಯ್ಯ,  ಕೊಂಡಯ್ಯ, ಟಿ.ಬಿ ಚೈತ್ರ, ಎನ್ .ಬಿ ಕುಮಾರ್, ಎಆರ್ ರಾಜ ನಾಯಕ,  ಡಿಸಿಸಿ ಬ್ಯಾಂಕ್ ನಿರ್ದೇಶಕ ಗುರುಸ್ವಾಮಿ ಹಾಗೂ ಸಿಇಓ ಬಿ. ಚರಣ್ ಗೌಡ ಮತ್ತಿತರರು ಇದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!