ಜೆಜೆಎಂ ಯೋಜನೆಯ ಭೂಮಿಪೂಜೆ ಕಾರ್ಯಕ್ರಮದಲ್ಲಿ ಹೆಸರುಗಳು ಹಾಗೂ ಫೋಟೋಗಳನ್ನು ಬಳಸದಿರುವ ಕುರಿತು ಪ್ರಶ್ನಿಸಲು ಹೋದ ಕಾಂಗ್ರೆಸ್ ಪಕ್ಷದ ವಿಧಾನ ಪರಿಷತ್ ಸದಸ್ಯರಿಗೆ ಬಿಜೆಪಿ ಶಾಸಕ ಸಿದ್ದು ಪಾಟೀಲ್ ಅವಾಚ್ಯ ಪದಗಳಿಂದ ನಿಂದಿಸಿರುವ ಘಟನೆ ಇಂದು ನಡೆದಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ಪಕ್ಷ, ಇದು ಬಿಜೆಪಿಗರ ಸಂಸ್ಕೃತ! ಡಿಯರ್ ಬಿಜೆಪಿ ನೀವು ರಕ್ಷಣೆ ಮಾಡಲು ಹೊರಟಿರುವ ಸಂಸ್ಕೃತಿ ಇದೇನಾ? ಹುಮ್ನಾಬಾದ್ ಶಾಸಕ ಬಿಜೆಪಿ ರೌಡಿ ಮೋರ್ಚಾದ ಅಧ್ಯಕ್ಷನಾಗಲು ಅರ್ಹತೆ ಹೊಂದಿದ್ದಾರೆ ಎಂದು ಲೇವಡಿ ಮಾಡಿದೆ.
ಇದು ಬಿಜೆಪಿಗರ ಸಂಸ್ಕೃತ!
Dear @BJP4Karnataka, ನೀವು ರಕ್ಷಣೆ ಮಾಡಲು ಹೊರಟಿರುವ ಸಂಸ್ಕೃತಿ ಇದೇನಾ?
ಹುಮ್ನಾಬಾದ್ ಶಾಸಕ ಬಿಜೆಪಿ ರೌಡಿ ಮೋರ್ಚಾದ ಅಧ್ಯಕ್ಷನಾಗಲು ಅರ್ಹತೆ ಹೊಂದಿದ್ದಾರೆ.
JJM ಯೋಜನೆಯ ಭೂಮಿಪೂಜೆಯ ಕಾರ್ಯಕ್ರಮದಲ್ಲಿ ಶಿಷ್ಠಾಚಾರದ ಪ್ರಕಾರ
ಅಲ್ಲಿನ ಕಾಂಗ್ರೆಸ್ ಪಕ್ಷದ ವಿಧಾನ ಪರಿಷತ್ ಸದಸ್ಯರಾದ ಚಂದ್ರಶೇಖರ್ ಪಾಟೀಲ್… pic.twitter.com/ECn5KoiA0E— Karnataka Congress (@INCKarnataka) December 22, 2023
“>
ಜೆಜೆಎಂ (JJM) ಯೋಜನೆಯ ಭೂಮಿಪೂಜೆಯ ಕಾರ್ಯಕ್ರಮದಲ್ಲಿ ಶಿಷ್ಠಾಚಾರದ ಪ್ರಕಾರ ಅಲ್ಲಿನ ಕಾಂಗ್ರೆಸ್ ಪಕ್ಷದ ವಿಧಾನ ಪರಿಷತ್ ಸದಸ್ಯರಾದ ಚಂದ್ರಶೇಖರ್ ಪಾಟೀಲ್ ಹಾಗೂ ಭೀಮರಾವ್ ಪಾಟೀಲ್ ಅವರ ಹೆಸರುಗಳನ್ನು, ಫೋಟೋಗಳನ್ನು ಬಳಸದಿರುವ ಕುರಿತು ಪ್ರಶ್ನಿಸಲು ಹೋದ ಕಾಂಗ್ರೆಸ್ ಪಕ್ಷದ ವಿಧಾನ ಪರಿಷತ್ ಸದಸ್ಯರಿಗೆ ಅವಾಚ್ಯ ಪದಗಳಿಂದ ನಿಂದಿಸಿದ ಬಿಜೆಪಿ ಶಾಸಕ ಸಿದ್ದು ಪಾಟೀಲ್ ಸರ್ಕಾರ ಬಿಜೆಪಿಯದ್ದೆ ಇದೆ ಎಂಬ ಭ್ರಮೆಯಲ್ಲಿರುವಂತಿದೆ! ಶಿಸ್ತಿನ ಪಕ್ಷ, ಸಭ್ಯರ ಪಕ್ಷ ಎಂದುಕೊಳ್ಳುವ ಬಿಜೆಪಿ ತಮ್ಮವರ ಈ ಭಾಷೆ, ರೌಡಿ ವರ್ತನೆಯ ಬಗ್ಗೆ ಯಾವ ಕ್ರಮ ಕೈಗೊಳ್ಳಲಿದೆ? ಎಂದು ಪ್ರಶ್ನಿಸಿದೆ.