ಕಲಾತಪಸ್ವಿ ಟ್ರಸ್ಟ್ ಹಾಗೂ ಈ.ಸಿ.ನಿಂಗೇಗೌಡ ಫೌಂಡೇಶನ್ ವತಿಯಿಂದ ಅ.23ರಂದು ಬೆಳಿಗ್ಗೆ 9.30ಕ್ಕೆ ಮಂಡ್ಯ ನಗರದ ಗಾಂಧಿಭವನದಲ್ಲಿ ದೇವಮ್ಮ ಚಿಕ್ಕಮರೀಗೌಡ ಸ್ಮರಣಾರ್ಥ 6ನೇ ವರ್ಷದ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆ ಹಾಗೂ ವೇಷಭೂಷಣ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಮಕ್ಕಳ ಪ್ರತಿಭೆ ಪ್ರೋತ್ಸಾಯಿಸಲು, ಸ್ಪರ್ಧಾತ್ಮಕತೆ ಬೆಳೆಸಲು ಹಾಗೂ ವ್ಯಕ್ತಿತ್ವ ವಿಕಾಸಕ್ಕಾಗಿ ನಡೆಯುವ ಈ ಸ್ಪರ್ಧೆಗಳಲ್ಲಿ ಎಲ್.ಕೆ.ಜಿ. ಯಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳು ಭಾಗವಹಿಸಬಹುದು, 4 ನೇ ತರಗತಿ ವಿದ್ಯಾರ್ಥಿಗಳು ವೇಷಭೂಷಣ ಸ್ಪರ್ಧೆಯಲ್ಲಿ ಭಾಗವಹಿಸಬಹುದು.
ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಪ್ರಮಾಣ ಪತ್ರ ನೀಡಲಾಗುವುದು, ಸುವರ್ಣ ಅಮೃತ ಮಹೋತ್ಸವದ ಪ್ರಯುಕ್ತ 75 ವಿಶೇಷ ಬಹುಮಾನಗಳನ್ನು ನೀಡಲಾಗುವುದು, ಹೆಚ್ಚಿನ ವಿವರಗಳಿಗೆ ಕಲಾತಪಸ್ವಿ ಟ್ರಸ್ಟ್, ಜಿಲ್ಲಾಸ್ಪತ್ರೆ ರಸ್ತೆ, ಮಂಡ್ಯ, ಮೊ.8861373267 ಹಾಗೂ 8497075299 ಸಂಪರ್ಕಿಸಬಹುದು.