Saturday, May 18, 2024

ಪ್ರಾಯೋಗಿಕ ಆವೃತ್ತಿ

ಶ್ರೀರಂಗಪಟ್ಟಣ | ನೀರು ತುಂಬಿದ್ದ ಕ್ವಾರಿಗೆ ಬಿದ್ದು ಇಬ್ಬರು ಯುವತಿಯರು ಸಾವು

ನೀರು ತುಂಬಿದ್ದ ಕ್ವಾರಿಗೆ ಬಿದ್ದು ಇಬ್ಬರು ಯುವತಿಯರು ಸಾವನ್ನಪ್ಪಿರುವ ಘಟನೆ ಗ್ರಾಮಾಂತರ ಠಾಣಾ ವ್ಯಾಪ್ತಿಯ‌ ಕಾಳೇನಹಳ್ಳಿ‌ ಶೆಡ್ ಬಳಿ‌‌ ಸಂಭವಿಸಿದೆ.

ಲೀನಾಮತಿ (19 ವರ್ಷ) ಮತ್ತು ಮೀನಾ (17 ವರ್ಷ) ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದುರ್ದೈವಿಗಳು.

ಒಟ್ಟು 4 ಮಕ್ಕಳು ಬಟ್ಟೆ ತೊಳೆಯಲೆಂದು ಈ ಹಿಂದೆ ಗಣಿಗಾರಿಕೆ ಮಾಡಿ ನೀರು ತುಂಬಿದ್ದ ಕ್ವಾರಿಯ ಹತ್ತಿರ ಹೋಗಿದ್ದು, ಅದರಲ್ಲಿ ಆರು ವರ್ಷದ ಒಂದು ಮಗು ನೀರಿಗೆ ಕಾಲುಜಾರಿ‌ ಬಿದ್ದಿದೆ.

ಆ ಮಗುವನ್ನು ಕಾಪಾಡಲು ಹೋಗಿ ಈ ಇಬ್ಬರು ಯುವತಿಯರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

ಘಟನಾ ಸ್ಥಳಕ್ಕೆ ವೃತ್ತ ನಿರೀಕ್ಷಕ ಬಿ.ಜಿ.ಕುಮಾರ್ ಮತ್ತು ಸಿಬ್ಬಂದಿ ತೆರಳಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!