Saturday, May 18, 2024

ಪ್ರಾಯೋಗಿಕ ಆವೃತ್ತಿ

ಯುವ ಸಮುದಾಯಕ್ಕೆ ಸ್ಪೂರ್ತಿ ಸ್ವಾಮಿ ವಿವೇಕಾನಂದ : ಡಾ.ಚಂದ್ರಶೇಖರ್

ಯುವ ಸಮುದಾಯಕ್ಕೆ ಬಹಳ ಸ್ಪೂರ್ತಿದಾಯಕ ವ್ಯಕ್ತಿತ್ವ ವಿವೇಕಾನಂದರದ್ದಾಗಿದೆ, ಯುವಶಕ್ತಿ ದೇಶದ ಶಕ್ತಿಯಾಗಿದೆ, ಚಿಕಾಗೋದಲ್ಲಿ ನಡೆದ ಸರ್ವಧರ್ಮ ಸಮ್ಮೇಳನವು ಸ್ವಾಮೀ ವಿವೇಕಾನಂದರಿಂದ ಪಾವನ ಗೊಂಡಿದೆ ಎಂದು ರೋಗಶಾಸ್ತ್ರಜ್ಞ ಡಾ.ಚಂದ್ರಶೇಖರ್ ತಿಳಿಸಿದರು.

ಮಂಡ್ಯನಗರದ ಎಸ್.ಡಿ.ಜಯರಾಂ ಆಸ್ಪತ್ರೆಯಲ್ಲಿ ಎಸ್.ಡಿ.ಜಯರಾಂ ಸಮಗ್ರ ಗ್ರಾಮೀಣಾಭಿವೃದ್ದಿ ಸಂಸ್ಥೆ, ಜಿಲ್ಲಾ ಗಾಯಕರ ಟ್ರಸ್ಟ್, ಎಸ್.ಡಿ.ಜಯರಾಂ ಆಸ್ಪತ್ರೆ ಆಡಳಿತ ಮಂಡಳಿ ಆಯೋಜಿಸಿದ್ದ ಸ್ವಾಮಿ ವಿವೇಕಾನಂದ ಅವರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಇಂದು ಭಾರತ ದೇಶವಲ್ಲದೆ ಇಡಿ ಪ್ರಪಂಚವೇ ಮಹಾಚೇತನ ಸ್ವಾಮೀ ವಿವೇಕಾನಂದರ ಜನ್ಮದಿನವನ್ನು ಆಚರಿಸಿ, ಆವರ ವೈಜ್ಞಾನಿಕ ಚಿಂತನೆಗಳು, ಜಗತ್ತಿನ ಯುವಶಕ್ತಿಗೆ ನೀಡಿದ ಸಂದೇಶಗಳನ್ನು ನೆನೆಪಿಸಿಕೊಳ್ಳುವ ಸುದಿನದಲ್ಲಿ ಇದ್ದೇವೆ ಎಂದು ನುಡಿದರು.

ಎಸ್.ಡಿ.ಜಯರಾಂ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಮಾದೇಶ್ ಮಾತನಾಡಿ, ವಿಶ್ವಕಂಡ, ಸೋದರತ್ವದ ಭ್ರಾತೃತ್ವವನ್ನು ಬಿತ್ತರಿಸಿದ ಹರಿಕಾರ ಸ್ವಾಮ ವಿವೇಕಾನಂದರನ್ನು ಸ್ಮರಿಸಿಕೊಳ್ಳುವ ಸುದಿನದಲ್ಲಿ ಜನ್ಮದಿನವನ್ನು ಆಚರಿಸುತ್ತಿದ್ದೇವೆ. ಯುವಜನರು ಸ್ವಾಮಿ ವಿವೇಕಾನಂದರ ಆದರ್ಶಗಳು, ಮೌಲ್ಯಗಳು, ಚಿಂತನೆಗಳನ್ನು ಮೈಗೂಡಿಸಿಕೊಂಡು ದೇಶಕಟ್ಟುವ ನಿಟ್ಟಿನಲ್ಲಿ ಸಾಗಬೇಕಿದೆ, ವಿವೇಕನಾಂದರು ಧರ್ಮಾತೀತ, ಜಾತ್ಯಾತೀತರು ಮತ್ತು ದೇಶಭಕ್ತರಾಗಿದ್ದರು ಎಂದು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಡಾ.ಕಾರ್ತೀಕ್, ಶುಶ್ರೂಷಕ ಸಿಬ್ಬಂದಿಗಳಾದ ಕೃಷ್ಣಮೂರ್ತಿ, ವಿದ್ಯಾಶ್ರೀ, ಆಶಾ, ಗೀರಿಶ್‌, ಫಾಧರ್ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!