ಸ್ವಾತಂತ್ರ್ಯೋತ್ಸವದ ಅಂಗವಾಗಿ ಮಂಡ್ಯನಗರದ ಪರೇಡ್ ಮೈದಾನದಲ್ಲಿ ನಡೆದ ಪಥಸಂಚಲನದಲ್ಲಿ ವಿವಿಧ ಇಲಾಖೆಯ ತುಕಡಿಗಳು ಬಹುಮಾನಗಳನ್ನು ಗಳಿಸಿಕೊಂಡಿವೆ.
ಇಲಾಖೆ ವಿಭಾಗ
ಜಿಲ್ಲಾ ಗೃಹ ರಕ್ಷಕದಳ(ಪ್ರಥಮ), ಅಬಕಾರಿ ತಂಡ (ದ್ವಿತೀಯ) ಮತ್ತು ನಾಗರೀಕ ಮಹಿಳಾ ತಂಡ (ತೃತೀಯ)
ಎನ್ ಸಿಸಿ ಮತ್ತು ಸ್ಕೌಟ್ಸ್ ಗೈಡ್ಸ್ ವಿಭಾಗ
ರೋಟರಿ ಪ್ರೌಢಾಶಾಲೆ (ಪ್ರಥಮ), ಮಂಡ್ಯ ವಿ.ವಿಯ ಎನ್ ಸಿಸಿ ಪುರುಷರ ವಿಭಾಗ (ದ್ವಿತೀಯ) ಹಾಗೂ ಅನಿಕೇತನ ಬಾಲಕಿಯರ ಪ್ರೌಢಶಾಲೆ (ತೃತೀಯ)
ಪ್ರೌಢಶಾಲಾ ವಿಭಾಗ ಕೆ.ಪಿ.ಎಸ್ ಪ್ರೌಢಶಾಲಾ (ಪ್ರಥಮ), ಸೆಂಟ್ ಜೋಸೆಫ್ ಬಾಲಕಿಯರ ಪ್ರೌಢಾಶಾಲೆ (ದ್ವಿತೀಯ) ಮತ್ತು ಕಾರ್ಮೆಲ್ ಕಾನ್ವೆಂಟ್ ಪ್ರೌಢಾಶಾಲೆ (ತೃತೀಯ)
ಹಿರಿಯ ಪ್ರಾಥಮಿಕ ಶಾಲಾ ವಿಭಾಗ
ಅಭಿನವ ಭಾರತಿ, ಕಾರ್ಮೆಲ್ ಕಾನ್ವೆಂಟ್ ಮತ್ತು ಸೆಂಟ್ ಜೋಸೆಫ್ ತಂಡಗಳು ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ಗಳಿಸಿದರು.
ಕ್ರಿಕೆಟ್
ಸ್ವಾತಂತ್ರ್ಯೋತ್ಸವದ ಅಂಗವಾಗಿ ಅಯೋಜಿಸಲಾಗಿದ್ದ ಸೌಹಾರ್ದಯುತ ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿಜೇತರಾದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಥಮ ಬಹುಮಾನ, ಪೊಲೀಸ್ ಇಲಾಖೆ ದ್ವಿತೀಯ ಬಹುಮಾನವನ್ನು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಅವರಿಂದ ಸ್ವೀಕರಿಸಿದರು.