Monday, May 20, 2024

ಪ್ರಾಯೋಗಿಕ ಆವೃತ್ತಿ

ಗಾಳಿಪಟ ಜೀವನದಲ್ಲಿ ಗುರಿ ಮುಟ್ಟುವ ಪಾಠ ಕಲಿಸುತ್ತದೆ: ಎನ್.ಚಲುವರಾಯಸ್ವಾಮಿ

ಮನುಷ್ಯ ಜೀವನದಲ್ಲಿ ಗುರಿಯನ್ನು ತಲುಪಬೇಕೆಂಬ ನೀತಿ ಪಾಠವನ್ನು ಗಾಳಿಪಟ ಕಲಿಸುತ್ತದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದರು.

ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪ್ರವಾಸೋದ್ಯಮ ಇಲಾಖೆ, ಕರ್ನಾಟಕ ಜನಪದ ಪರಿಷತ್ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ 33 ನೇ ರಾಜ್ಯ ಮಟ್ಟದ ಗಾಳಿಪಟ ಉತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಣ, ಅನ್ನ ದಾಸೋಹದ ಜೊತೆಗೆ ಜನಪದ ಕಲೆಯನ್ನು ಆದಿ ಚುಂಚನಗಿರಿ ಮಠ ಪೋಷಿಸಿ ಬೆಳೆಸುತ್ತಿದೆ.ಆದಿ ಚುಂಚನಗಿರಿ ಮಠ ಜನಪದ ಕಲೆಯಲ್ಲಿ ಆಸಕ್ತಿ ಹೊಂದಿರುವವರನ್ನು ಬೆಳೆಸಿ ಅವರ ಕಲೆಯನ್ನು ಸಮಾಜಕ್ಕೆ ನೀಡುತ್ತಿದೆ ಎಂದರು.

ಗಾಳಿಪಟ ಮನಸ್ಸಿಗೆ ಸಂತೋಷ ನೀಡುವ ಕ್ರೀಡೆ. ಆಷಾಢ ಮಾಸದ ಏಕಾದಶಿಯಲ್ಲಿ ಎಲ್ಲಡೆ ಗಾಳಿಪಟದ ಹಾರಾಟವನ್ನು ನೋಡುತ್ತಿದ್ದೇವೆ. ಇದು ಮೊದಲು ಸಾರ್ವಜನಿಕರ ಹಬ್ಬವಾಗಿತ್ತು. ಇಂದು ಜನಪದ ಕ್ರೀಡೆಗಳಿಂದ ಜನರು ವಿಮುಖರಾಗುತ್ತಿದ್ದಾರೆ.ಆದರೆ ಇಂದು ಸರ್ಕಾರದಿಂದ ಗ್ರಾಮೀಣ ಕ್ರೀಡೆಯಾದ ಗಾಳಿಪಟ ಉತ್ಸವ ಆಚರಿಸಲಾಗುತ್ತಿದೆ.ನಾವು ಇಂತಹ ಜನಪದ ಕಲೆ ಹಾಗೂ ಕ್ರೀಡೆಯನ್ನು ಉಳಿಸಿ ಬೆಳಸಬೇಕಿದೆ ಎಂದರು.

ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಗಾಳಿಪಟ ಹಾರಿಸಿದ ಅನುಭವ ಸಿಗುವುದು ಅದನ್ನು ಹಾರಾಟ ಮಾಡಿದಾಗ, ಬದುಕಿನ ಸುತ್ತ ಕಷ್ಟಗಳಿರುತ್ತದೆ. ಅದನ್ನು ಗೆಲ್ಲಲು ದ್ವೇಷ, ಅಸೂಯೆಯನ್ನು ದೂರವಿಟ್ಟು, ತತ್ವ, ಸಿದ್ದಾಂತ ಎಂಬ ಸೂತ್ರವನ್ನು ರೂಢಿಸಿಕೊಂಡು ಜೀವನದ ಗಾಳಿಪಟ ಹಾರಿಸುವ ಕಲೆಗಾರರಾಗಬೇಕು. ಆಗ ಆಕಾಶದ ಯಾವುದೇ ಎತ್ತರಕ್ಕೆ ಏರಲೂ ಅಥವಾ ಬೆಳೆಯಲು ಸಾಧ್ಯ. ಸೂತ್ರ ಮುರಿದು ಹೋದರೆ ಗುರಿ ಮುಟ್ಟಲು ಸಾಧ್ಯವಿಲ್ಲ ಎಂದರು.

ಜಾಹೀರಾತು

ಗಾಳಿಪಟ ತುಂಬ ಹಳೆಯ ಕಾರ್ಯಚಟುವಟಿಕೆಯಾಗಿದ್ದು, ಯುವಕರು ಹಾಗೂ ವಯಸ್ಸಾದವರಿಗೆ ಗಾಳಿಪಟ ಉತ್ಸಾಹ ತುಂಬುವ ಚಟುವಟಿಕೆ. ಮಕ್ಕಳ ಜೀವನದಲ್ಲಿ ಉಲ್ಲಾಸ, ಜಿಗಿಯುವ ಮತ್ತು ಮಹತ್ತರ ಸಾಧನೆ ಸಾಧಿಸುವ ಛಲವನ್ನು ಗಾಳಿಪಟ ತುಂಬುತ್ತದೆ ಎಂದು ಕರ್ನಾಟಕ ಜಾನಪದ ಪರಿಷತ್ ನ ರಾಜ್ಯಾಧ್ಯಕ್ಷ ಇ.ಸಿ. ರಾಮಚಂದ್ರ ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಣ್ಯರನ್ನು ಪೂಜಾ ಕುಣಿತ, ಕಂಸಾಳೆ, ಪಟ ಕುಣಿತ,ಹುಲಿವೇಷ ಮೊದಲಾದ ಕಲಾ ಪ್ರಾಕಾರಗಳು ಹಾಗೂ ಪೂರ್ಣ ಕುಂಭ ಹೊತ್ತ ಮಹಿಳೆಯರು ಸ್ವಾಗತಿಸಿದರು.

ಹೆಣ್ಣು ಭ್ರೂಣ ಹತ್ಯೆ ಅಪರಾಧ, ಪರಿಸರ ಉಳಿಸಿ, ಓಂಕಾರ, ಪುನೀತ ರಾಜ್ ಕುಮಾರ್, ಆದಿ ಚುಂಚನಗಿರಿ ಬಾಲಗಂಗಾಧರ್ ನಾಥ ಮಹಾಸ್ವಾಮೀಜಿ, ಆಂಜನೇಯ ಸ್ವಾಮಿ, ವಿವಿಧ ಪಕ್ಷಿ ಆಕೃತಿಯ ಗಾಳಿಪಟ ಸೇರಿದಂತೆ ವಿವಿಧ‌ ರೀತಿಯ ಗಾಳಿ ಪಟಗಳನ್ನು ಹಾರಿಸಿದರು.

ಕಾರ್ಯಕ್ರಮದಲ್ಲಿ ಶಾಸಕ ರವಿಕುಮಾರ್, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ‌ವರಿಷ್ಢಾಧಿಕಾರಿ ಎನ್, ಯತೀಶ್ ,ಜಿಲ್ಲಾ ಪಂಚಾಯತ್ ಮಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್  ಆಸೀಫ್, ಉಪವಿಭಾಗಾಧಿಕಾರಿ ನಂದೀಶ್, ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಡಿ.ಪಿ.ಸ್ವಾಮಿ, ನಾಗಮಂಗಲ ತಾಲ್ಲೂಕು ಅಧ್ಯಕ್ಷ ಸಿ.ಎನ್ ಮಂಜೇಶ್ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!