ಐದು ದಿನದ ನವಜಾತ ಗಂಡು ಮಗುವೊಂದನ್ನು ಬುಟ್ಟಿಯಲ್ಲಿಟ್ಟು ಪಾಲಕರು ಪರಾರಿಯಾಗಿರುವ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಚಿಕ್ಕಮರಳಿ ಗ್ರಾಮದ ಬಳಿಯ ಲೋಕಪಾವನಿ ನದಿಯ ಬಳಿ ಶನಿವಾರ ಬೆಳಿಗ್ಗೆ ನಡೆದಿದೆ.
ಐದು ದಿನದ ಈ ಮಗುವನ್ನು ಬೆಳಗಿನ ಜಾವಾ ಬುಟ್ಟಿಯಲ್ಲಿರಿಸಿ ತಾಯಿಯೂ ಬಿಟ್ಟು ಹೋಗಿದ್ದಾಳೆ.
ಈ ವಿಚಾರ ಗಮನಕ್ಕೆ ಬರುತ್ತಿದ್ದಂತೆ ಮಗುವನ್ನು ಪಾಂಡವಪುರ ಪೊಲೀಸರು ಹಾಗೂ ಸಿಡಿಪಿಒ ನಟರಾಜು ರಕ್ಷಣೆ ಮಾಡಿ, ಮಂಡ್ಯದ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ. ಮಗು ಆರೋಗ್ಯವಾಗಿದೆ ಎಂಬುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.