Thursday, May 16, 2024

ಪ್ರಾಯೋಗಿಕ ಆವೃತ್ತಿ

ಮತ್ತೊಂದು ಹೃದಯ ಕಸಿಗೆ ಸಾಕ್ಷಿಯಾದ ಧಾರವಾಡ ಮತ್ತು ಬೆಳಗಾವಿ ಆಸ್ಪತ್ರೆ


  • ಅಪಘಾತದಿಂದ ವ್ಯಕ್ತಿಯೊಬ್ಬರ ಮೆದುಳು ನಿಷ್ಕ್ರಿಯವಾಗಿತ್ತು
  • ಜೀರೋ ಟ್ರಾಫಿಕ್ ವ್ಯವಸ್ಥೆಯಲ್ಲಿ ಬೆಳಗಾವಿಗೆ ಹೃದಯ ರವಾನೆ

ಕಳೆದ ಕೆಲವು ತಿಂಗಳ ಹಿಂದೆ ಹೃದಯ ಕಸಿ ಮಾಡಿದ್ದ ಧಾರವಾಡ ಮತ್ತು ಬೆಳಗಾವಿ ಆಸ್ಪತ್ರೆಗಳ ಸಿಬ್ಬಂದಿ, ಇದೀಗ ಮತ್ತೊಂದು ಹೃದಯ ಕಸಿ ಮಾಡಿ ಯಶಸ್ವಿಯಾಗಿದೆ. 

ಅಪಘಾತದಿಂದ ಮೆದಳು ನಿಷ್ಕ್ರೀಯಗೊಂಡಿದ್ದ ವ್ಯಕ್ತಿಯೊಬ್ಬರ ಹೃದಯವನ್ನು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಮತ್ತೊಬ್ಬ ವ್ಯಕ್ತಿಗೆ ಕಸಿ ಮಾಡಲಾಗಿದೆ.

ಧಾರವಾಡದ ಧರ್ಮಸ್ಥಳ ಮಂಜುನಾಥ ಆಸ್ಪತ್ರೆಯಿಂದ ಬೆಳಗಾವಿ ಕೆಎಲ್‍ಇ ಆಸ್ಪತ್ರೆಗೆ ಶುಕ್ರವಾರ ನಸುಕಿನಲ್ಲಿ ಜಾವ ಝೀರೊ ಟ್ರಾಫಿಕ್ ವ್ಯವಸ್ಥೆಯೊಂದಿಗೆ ಹೃದಯ ಸಾಗಿಸಲಾಗಿದೆ.

ಮೆದುಳು ನಿಷ್ಕ್ರಿಯಗೊಂಡು ಎಸ್‌ಡಿಎಂ ಆಸ್ಪತ್ರೆಗೆ ದಾಖಲಿಸಿದ್ದ ವ್ಯಕ್ತಿಯ ಕುಟುಂಬ ಸದಸ್ಯರೊಂದಿಗೆ ಚರ್ಚಿ ನಡೆಸಿದ ವೈದ್ಯರ ತಂಡ, ಹೃದಯ ದಾನ ಮಾಡಲು ಮನವಿ ಮಾಡಿಕೊಂಡಿತು. ಇದಕ್ಕೆ ಕುಟುಂಬ ಸದಸ್ಯರು ಒಪ್ಪಿಕೊಂಡೊದ್ದು, ಹೃದಯ ರವಾನೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಎಸ್‌ಡಿಎಮ್‌ ಆಸ್ಪತ್ರೆ ಆಡಳಿತ ಮಂಡಳಿ ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!