ಮಳವಳ್ಳಿ ಪಟ್ಟಣದ ಕುಮಾರ ಸಮುದಾಯದ ಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ 72ನೇ ಹುಟ್ಟುಹಬ್ಬದ ಅಂಗವಾಗಿ ಬಿಜೆಪಿಯಿಂದ ರಕ್ತದಾನ ಶಿಬಿರ ನಡೆಸಿ 82 ಯೂನಿಟ್ ರಕ್ತ ಸಂಗ್ರಹಿಸಲಾಯಿತು.
ಬಿಜೆಪಿ ಯುವ ಮೋರ್ಚಾ ಕಾರ್ಯಕಾರಣಿ ಸದಸ್ಯ ರಜತ್ ಮಾತನಾಡಿ, ಜನಸಾಮಾನ್ಯರಿಗೆ ಸಹಾಯ ಮಾಡುವುದರ ಮೂಲಕ ಹುಟ್ಟುಹಬ್ಬಗಳು ನಡೆಯಬೇಕೆಂದು ತಿಳಿಸಿದರು
ಮುಖಂಡ ಜಿ.ಮುನಿರಾಜು ಮಾತನಾಡಿ, ಮೋದಿ ಅವರ ಜನ್ಮದಿನವನ್ನು ತಾಲ್ಲೂಕಿನ ಬಿಜೆಪಿ ಯುವ ಮಿತ್ರರು ರಕ್ತದಾನ ಶಿಬಿರದಂತಹ ಸೇವಾ ಕಾರ್ಯಕ್ರಮವನ್ನು ಆಯೋಜಿಸಿರುವುದು ಸಂತಸ ತಂದಿದೆ ಎಂದರು
ಶಿಬಿರದಲ್ಲಿ ಮಾಜಿ ಸಚಿವ ಬಿ.ಸೋಮಶೇಖರ್, ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಶ್ರೀಧರ್, ಮಧು ಗಂಗಾಧರ್, ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎನ್.ಕೃಷ್ಣ, ಯುವ ಮೋರ್ಚಾ ಅಧ್ಯಕ್ಷ ಮೋಹನ್, ಜಿಲ್ಲಾ ಘಟಕದ ಯುವ ಮೋರ್ಚಾ ಅಧ್ಯಕ್ಷ ವಿಶೃತ್, ಪುರಸಭೆ ಸದಸ್ಯ ಪುಟ್ಟಸ್ವಾಮಿ ಹಾಜರಿದ್ದರು.
ಮುಖಂಡರಾದ ಯಮದೂರು ಸಿದ್ದರಾಜು ಹಲಸಹಳ್ಳಿ ಅಶೋಕ್, ದೇವರಾಜು, ರಾಜೀವ್, ಕೆ.ಸಿ.ನಾಗೇಗೌಡ, ಬಸವರಾಜು, ರಾಜಣ್ಣ, ಜಗದೀಶ್, ಕ್ಯಾತನಹಳ್ಳಿ ಅಶೋಕ್, ಸಿದ್ದಲಿಂಗಸ್ವಾಮಿ ಉಪಸ್ಥಿತರಿದ್ದರು.