Saturday, May 18, 2024

ಪ್ರಾಯೋಗಿಕ ಆವೃತ್ತಿ

ಬಿಜೆಪಿ ಸರ್ಕಾರ ಖಜಾನೆ ಲೂಟಿ ಹೊಡೆಯುತ್ತಿದೆ : ಎಚ್.ಡಿ.ಕೆ

ರಾಜ್ಯದ ಖಜಾನೆ ತುಂಬಿಸುವ ಮತದಾರರು ಸಂಕಷ್ಟದಲ್ಲಿರುವಾಗ, ಅವರ ನೆರವಿಗೆ ಧಾವಿಸಬೇಕಾದ ಬಿಜೆಪಿ ಸರ್ಕಾರ ಖಜಾನೆ ಲೂಟಿ ಹೊಡೆಯುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ‌.ಕುಮಾರಸ್ವಾಮಿ ತಿಳಿಸಿದರು.

ಮದ್ದೂರು ತಾಲ್ಲೂಕಿನ ಭಾರತೀನಗರಕ್ಕೆ ಆಗಮಿಸಿದ ಪಂಚರತ್ನ ರಥಯಾತ್ರೆಯಲ್ಲಿ ಪಾಲ್ಗೊಂಡಿದ್ದ ಸಹಸ್ರಾರು ಪಕ್ಷದ ಮುಖಂಡರು, ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.

ರಾಜ್ಯದ ಜನರಿಂದ ಸಂಗ್ರಹಿಸಿದ ತೆರಿಗೆ ಹಣ ಖಜಾನೆ ಸೇರಿದ್ದು, ಅದನ್ನು ಬಿಜೆಪಿ ಸರ್ಕಾರ ಲೂಟಿ ಹೊಡೆಯುತ್ತಿದೆ.ನಮ್ಮ ಸರ್ಕಾರ ಅಧಿಕಾರಕ್ಕೆ ತಂದರೆ ಈ ಹಣವನ್ನು ನಿಮಗೆ ಕೊಡುವ ಕೆಲಸ ಮಾಡುತ್ತೇನೆ ಎಂದು ಘೋಷಿಸಿದರು.

ಪಂಚರತ್ನ ಯಾತ್ರೆ ಬಗ್ಗೆ ವಿರೋಧ ಪಕ್ಷದವರು ಟೀಕೆ ಮಾಡುತ್ತಿದ್ದಾರೆ.ಪ್ರತಿದಿನ ಕನಿಷ್ಠ 50 ಜನ ಆರೋಗ್ಯ‌ ಸಮಸ್ಯೆ ಹೇಳಿಕೊಂಡು ನನ್ನ ಬಳಿ ಬರ್ತಾರೆ.ಕಿಡ್ನಿ ಸಮಸ್ಯೆ, ಹೃದಯ ಸಮಸ್ಯೆ ಸೇರಿದಂತೆ ಹಲವು
ಆರೋಗ್ಯ ಸಮಸ್ಯೆಯಿಂದ ಜನರು ಬಳುತ್ತಿದ್ದು,ಚಿಕಿತ್ಸೆಗಾಗಿ ರೈತರು ಸಾಲ ಮಾಡ್ತಿದ್ದಾರೆ.ಹಣ ಹೊಂದಿಸಲು ಇರುವ ತುಂಡು ಜಮೀನು ಮಾರಿಕೊಳ್ಳುತ್ತಿದ್ದಾರೆ.ಇದನ್ನು ತಪ್ಪಿಸಲು ಎಲ್ಲರಿಗೂ ಆರೋಗ್ಯ ಭಾಗ್ಯ ನೀಡಲಾಗುವುದು ಎಂದರು.

ಯುವಜನತೆ ಪದವಿ ಪಡೆದು,ಉದ್ಯೋಗ ಸಿಗದೆ ಸಮಸ್ಯೆ ಅನುಭವಿಸುತ್ತಿದ್ದಾರೆ. ಅವರೆಲ್ಲರ ಬದುಕನ್ನು ಸರಿಪಡಿಸಲು ಪಂಚರತ್ನ ಯೋಜನೆ ಜಾರಿಗೆ ಬರಬೇಕು.ಆದ್ದರಿಂದ ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬರಬೇಕಿದ್ದು,
ಜನರಲ್ಲಿ ಅಧಿಕಾರಕ್ಕೆ ತರುವಂತೆ ಮನವಿ ಮಾಡಿದರು.

ಕೊಡಗಿನಲ್ಲಿ ಮಳೆ ಅನಾಹುತವಾಯ್ತು. ಹಲವರು ಮನೆಗಳನ್ನ ಕಳೆದು ಕೊಂಡ್ರು. ಕೊಡಗಿನಲ್ಲಿ ನಮ್ಮ ಸರ್ಕಾರ ಮನೆ ಕಟ್ಟಿ ಕೊಟ್ಟಿತು, ಆದರೆ ಬಿಜೆಪಿಯವರು ನಮ್ಮ ಸರ್ಕಾರ ಕಟ್ಟಿದ್ದು ಎಂದು ಪತ್ರಿಕೆಗಳಿಗೆ ಜಾಹಿರಾತು ನೀಡ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

65 ವರ್ಷ ಮೇಲ್ಪಟ್ಟ ಎಲ್ಲರಿಗೂ ಸಂಧ್ಯಾ ಸುರಕ್ಷಾ ಯೋಜನೆ ಭಾಗವಾಗಿ ಈಗ 1200 ರೂ.ಇದೆ‌‌.ಅದನ್ನು 5000 ರೂ‌ ಕೊಡುತ್ತೇನೆ.ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ ಸಾಲ ಮನ್ನಾ ಮಾಡುತ್ತೇನೆ. ಶಾಸಕ ತಮ್ಮಣ್ಣ ಎಲ್ಲಾ ಕೆರೆಗಳನ್ನು ತುಂಬಿಸಿದ್ದಾರೆ. ಸದಾ ಕ್ಷೇತ್ರದಲ್ಲಿದ್ದು, ಜನರ ಸಹಾಯಕ್ಕೆ ಬರುವ ಇವರನ್ನು ಮತ್ತೆ ಗೆಲ್ಲಿಸಿ ಅಂದರು.
ದೇವೇಗೌಡರ ಕುಟುಂಬದ ಕಷ್ಟ ಸುಖದಲ್ಲಿ ಮಂಡ್ಯ ಜಿಲ್ಲೆ ಜನರು ಭಾಗಿ‌, ಮೊದಲ ಆದ್ಯತೆ ನೀಡುವ ಮಂಡ್ಯ ಜನರು ‌ದೇವೇಗೌಡರು ನಡೆಯಲು ಸಾಧ್ಯವಾಗದಿದ್ದರೂ ವೀಲ್ ಚೇರ್ ನಲ್ಲಿ ಮೇಕೆದಾಟು ವಿಚಾರವಾಗಿ ಸಂಸತ್ತಿನಲ್ಲಿ ಮಾತನಾಡಿದ್ದಾರೆ. ನನ್ನನ್ನು ನಂಬಿ ಒಂದು ಅವಕಾಶ ಕೊಡಿ ಎಂದರು.

ಈ ಸಂದರ್ಭದಲ್ಲಿ ಶಾಸಕ ಡಿ.ಸಿ ತಮ್ಮಣ್ಣ,ಮಾಜಿ ಶಾಸಕ ಕೆ.ಟಿ.ಶ್ರೀಕಂಠೇಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ತಾಲ್ಲೂಕು ಘಟಕದ ಅಧ್ಯಕ್ಷ ಚಿಕ್ಕತಿಮ್ಮೇಗೌಡ, ಡಿ.ಸಿ.ತಮ್ಮಣ್ಣ ಪುತ್ರಿ ಸೌಮ್ಯರಮೇಶ್, ಮುಖಂಡರಾದ ಅಣ್ಣೂರು ನವೀನ್, ಬೋರವೆಲ್ ರಾಮಚಂದ್ರು ಇತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!