Monday, May 20, 2024

ಪ್ರಾಯೋಗಿಕ ಆವೃತ್ತಿ

ಪೆನ್ ಡ್ರೈವ್ ಬಿಟ್ಟಿದ್ದು ದೇವರಾಜೇಗೌಡ, ಅದಕ್ಕೆ ಕುಮ್ಮಕ್ಕು ಕೊಟ್ಟಿದ್ದು ಪ್ರೀತಂ ಗೌಡ: ಕಾಂಗ್ರೆಸ್

ಬಿಜೆಪಿ, ಜೆಡಿಎಸ್ ಪಕ್ಷಗಳಿಗೆ ನಿಜಕ್ಕೂ ನೈತಿಕತೆ ಇದ್ದರೆ ಈ ಕೊಳಕು ರಾಜಕಾರಣ ಬಿಟ್ಟು ನೊಂದ ಮಹಿಳೆಯರಿಗೆ ಸಾಂತ್ವನ ಹೇಳಲಿ ಎಂದು ಕಾಂಗ್ರೆಸ್‌ ಕಿಡಿಕಾರಿದೆ.

ಎಕ್ಸ್‌ ತಾಣದಲ್ಲಿ ಪೋಸ್ಟ್‌ ಮಾಡಿರುವ ಕಾಂಗ್ರೆಸ್‌, “ವಿಡಿಯೋ ಶೂಟ್ ಮಾಡಿಕೊಂಡಿದ್ದು ಪ್ರಜ್ವಲ್, ಮಹಿಳೆಯರನ್ನು ಅಮಾನವೀಯವಾಗಿ ಬಳಸಿಕೊಂಡಿದ್ದು ಪ್ರಜ್ವಲ್, ವಿಡಿಯೋ ಕದ್ದಿದ್ದು ಡ್ರೈವರ್ ಕಾರ್ತಿಕ್, ಕಾರ್ತಿಕ್ ನಿಂದ ಪೆನ್ ಡ್ರೈವ್ ಪಡೆದುಕೊಂಡಿದ್ದು ದೇವರಾಜೇಗೌಡ, ವಿಡಿಯೋ ಇದೆ, ಹೊರಗೆ ಬಿಡ್ತೀನಿ ಎಂದು ಹಲವಾರು ಬಾರಿ ಹೇಳಿದ್ದು ದೇವರಾಜೇಗೌಡ, ಪೆನ್ ಡ್ರೈವ್ ಹೊರಗೆ ಬಿಟ್ಟಿದ್ದು ದೇವರಾಜೇಗೌಡ, ಅದಕ್ಕೆ ಕುಮ್ಮಕ್ಕು ಕೊಟ್ಟಿದ್ದು ಪ್ರೀತಂ ಗೌಡ ಹಾಗೂ ಬ್ರದರ್ ಸ್ವಾಮಿ! ಈ ಎಲ್ಲಾ ಘಟನೆಗಳಲ್ಲೂ ಬಿಜೆಪಿ + ಜೆಡಿಎಸ್ ನವರೇ ಇದ್ದಾರೆ” ಎಂದು ಕಿಡಿಕಾರಿದೆ.

“ವಾಸ್ತವ ಹೀಗಿರುವಾಗ ಡಿಕೆ ಶಿವಕುಮಾರ್‌ ಅವರ ಹೆಸರು ಎಳೆದಿದ್ದು ಬಿಜೆಪಿಯ ಹೀನ ರಾಜಕಾರಣದ ಮುಂದುವರೆದ ಭಾಗವಷ್ಟೇ” ಎಂದು ಕಾಂಗ್ರೆಸ್‌ ಟೀಕಿಸಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!