Saturday, May 18, 2024

ಪ್ರಾಯೋಗಿಕ ಆವೃತ್ತಿ

ನಗರಸಭೆಯಲ್ಲಿ 74 ನೇ ಗಣರಾಜ್ಯೋತ್ಸವ ಆಚರಣೆ

ಮಂಡ್ಯದ ನಗರಸಭೆ ಕಚೇರಿಯ ಆವರಣದಲ್ಲಿ 74 ನೇ ಗಣರಾಜ್ಯೋತ್ಸವ ಆಚರಿಸಲಾಯಿತು.

ನಗರಸಭೆಯ ಅಧ್ಯಕ್ಷ ಎಚ್.ಎಸ್.ಮಂಜು ಧ್ವಜಾರೋಹಣ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಭಾರತದ ಗಣರಾಜ್ಯೋತ್ಸವ ಸಮಾನತೆ, ಸೋದರತೆ, ಏಕತೆಯ ಸಂದೇಶ ಸಾರುತ್ತದೆ. ಭಾರತದ ಪ್ರಜೆಗಳಿಗಾಗಿ ಇರುವ ಶಾಸಕಾಂಗ, ನ್ಯಾಯ ಒದಗಿಸುವ ನ್ಯಾಯಾಂಗ ಮತ್ತು ಜನರ ಸೇವೆ ಮಾಡಲು ಇರುವ ಕಾರ್ಯಾಂಗ ಹೇಗಿರಬೇಕು, ಏನೆಲ್ಲ ನೀತಿ ನಿಯಮಗಳ ಪಾಲಿಸಬೇಕು ಎಂಬುದನ್ನು ತಿಳಿಸುವುದೇ ಸಂವಿಧಾನ ಎಂದರು.

nudikarnataka.com
ಜಾಹೀರಾತು

ಭಾರತದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿರುವ ಸೈನಿಕರು, ವಿಜ್ಞಾನಿಗಳು,ತಂತ್ರಜ್ಞರು,ರೈತರು,ಕಾರ್ಮಿಕರಿಗೆ ನಾವೆಲ್ಲ ಚಿರ ಋಣಿ ಆಗಿರಬೇಕು ಎಂದರು.

ಉಪಾಧ್ಯಕ್ಷೆ ಇಷ್ರತ್ ಫಾತಿಮಾ ,ಸ್ಥಾಯಿ ಸಮಿತಿ ಅಧ್ಯಕ್ಷೆ ಮೀನಾಕ್ಷಿ ಪುಟ್ಟಸ್ವಾಮಿ,ನಗರಸಭಾ ಸದಸ್ಯೆ ಪೂರ್ಣಿಮಾ, ಆಯುಕ್ತ ಮಂಜುನಾಥ್, ಕಾರ್ಯಪಾಲಕ ಅಭಿಯಂತರ ರವಿಕುಮಾರ್,ಪರಿಸರ ಅಭಿಯಂತರ ರುದ್ರೇಗೌಡ ಸೇರಿದಂತೆ ಇನ್ನಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!