Sunday, May 19, 2024

ಪ್ರಾಯೋಗಿಕ ಆವೃತ್ತಿ

ಮದ್ದೂರು| ವಿದ್ಯಾರ್ಥಿ ರೋಹಿತ್ ನಾಪತ್ತೆ

ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿಯ ಸಂಕಲ್ಪ ಕ್ಲಿನಿಕ್ ಕಟ್ಟಡದಲ್ಲಿ ವಾಸವಾಗಿರುವ ಮಹದೇವಯ್ಯ ಅವರ ಮಗ ರೋಹಿತ್ ಆಲಿಯಾಸ್ ದುನಿಯಾ(16) ಎಂಬ ಬಾಲಕ ಶಾಲೆಗೆ ಹೋಗಿ ಬರುತ್ತೇನೆಂದು ಹೋದವನು ಮತ್ತೆ ಮನೆಗೆ ಬಂದಿಲ್ಲ ಎಂದು ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ರೋಹಿತ್ ಕೆ.ಎಂ.ದೊಡ್ಡಿಯ ಕೇಂಬ್ರಿಜ್ಡ್ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ ಓದುತ್ತಿರುವ ವಿದ್ಯಾರ್ಥಿಯಾಗಿದ್ದು, ಸೆ.27ರಂದು ಬೆಳಿಗ್ಗೆ ಶಾಲೆಗೆ ಹೋದವನು, ಮತ್ತೆ ಮನೆಗೆ ಬಂದಿಲ್ಲ. ಆತನ ಪೋಷಕರು ಸ್ಥಳೀಯ ಸ್ನೇಹಿತರ ಮನೆ, ಬಂಧು-ಬಳಗದವರನ್ನು ವಿಚಾರಿಸಿ ಎಲ್ಲೂ ಪತ್ತೆಯಾಗದ ಕಾರಣ ದೂರು ನೀಡಿ ಪತ್ತೆ ಮಾಡಿಕೊಡುವಂತೆ ಮನವಿ ಮಾಡಿದ್ದಾರೆ.

ರೋಹಿತ ಚಹರೆ : ಕೋಲುಮುಖ, ಕಪ್ಪುಬಣ್ಣ, ಕನ್ನಡ ಭಾಷೆ ಬರುತ್ತದೆ, ಹಣೆಯ ಮೇಲೆ ಗಾಯದ ಗುರುತಿದೆ. ಎತ್ತರ 5.3 ಅಡಿಯಿದ್ದಾನೆ, ಈತನ ಬಗ್ಗೆ ತಿಳಿದರೆ ಸ್ಥಳೀಯ ಪೊಲೀಸ್‌ ಠಾಣೆಗೆ ಅಥವಾ 9900621871 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡುವಂತೆ ಕೋರಲಾಗಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!