ಮಂಡ್ಯ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಬಿ.ಆರ್.ರಾಮಚಂದ್ರರವರು ಇಂದು ಮಂಡ್ಯ ತಾಲ್ಲೂಕಿನ ಆನಸೋಸಲು ಗ್ರಾಮಕ್ಕೆ ಮತ ಯಾಚಿಸಲು ಆಗಮಿಸಿದಾಗ ಗ್ರಾಮಸ್ಥರು ಚುನಾವಣಾ ಖರ್ಚಿಗೆ ಹಣ ನೀಡಿ ಅಭಿಮಾನ ಮೆರೆದರು.
ಇಂದು ಬೆಳಿಗ್ಗೆ ಪ್ರಚಾರಕ್ಕೆ ಆನಸೋಸಲು ಗ್ರಾಮಕ್ಕೆ ಆಗಮಿಸಿದ ರಾಮಚಂದ್ರ ಅವರಿಗೆ ಮಹಿಳೆಯರು ಪೂರ್ಣ ಕುಂಭ ಸ್ವಾಗತ ನೀಡಿದರು.
ಈ ಸಂದರ್ಭದಲ್ಲಿ ಬಿ.ಆರ್ ರಾಮಚಂದ್ರರವರು ಮಾತನಾಡಿ, ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ ಕುಮಾರಣ್ಣರವರ ಪಂಚರತ್ನ ಯೋಜನೆಗಳ ಜಾರಿಗೆ ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬರಲು ನನಗೊಂದು ಅವಕಾಶ ನೀಡಿ. ನಾನು ನಿಮ್ಮ ಮನೆಯ ಮಗನಂತೆ ಭಾವಿಸಿ ನಿಮ್ಮ ಸೇವೆ ಮಾಡಲು ಅನುವು ಮಾಡಿಕೊಡಿ
ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಕಾರ್ಯಕರ್ತರುಗಳಾದ ರಾಮಲಿಂಗಣ್ಣ 2 ಲಕ್ಷ ರೂ ಹಾಗೂ ಯುವನಾಯಕ ಅರುಣ್ ರವರು 1.50ಲಕ್ಷ ವನ್ನು ಚುನಾವಣಾ ವೆಚ್ಚಕ್ಕೆಂದು ನೀಡಿ ಅಭಿಮಾನ ಮರೆದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯರುಗಳಾದ ಕೆ.ಟಿ ಶ್ರೀಕಂಠೇಗೌಡ, ಅಪ್ಪಾಜಿಗೌಡ, ಹಿಂದುಳಿದ ವರ್ಗಗಳ ಜೆಡಿಎಸ್ ರಾಜ್ಯಾಧ್ಯಕ್ಷ ಜಯರಾಮು, ಮಾಜಿ ಶಾಸಕ ಜಿ.ಬಿ ಶಿವಕುಮಾರ್, ಶ್ರೀ ಸಾಯಿ ಎಲೆಕ್ಟ್ರಾನಿಕ್ ಮಾಲೀಕ ಸ್ವಾಮಿ, ಕೃಷ್ಣೇಗೌಡ, ಲಿಂಗರಾಜು, ರಾಮಲಿಂಗ, ರಾಯಶೆಟ್ಟಿಪುರ ಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.