ಮಂಡ್ಯ ಜಿಲ್ಲಾ ಹಾಪ್ ಕಾಮ್ಸ್ ನೌಕರರ ಸಂಘ”ದ ವತಿಯಿಂದ ಇಂದು “ಕಾರ್ಮಿಕರ ದಿನಾಚರಣೆ” ಅಚರಿಸಲಾಯಿತು.
ಕಾರ್ಮಿಕ ದಿನಾಚರಣೆಯ ಉದ್ದೇಶ,ಮಹತ್ವದ ಬಗ್ಗೆ ಮಾಹಿತಿ ನೀಡಿದ ನೌಕರರ ಸಂಘದ ಅಧ್ಯಕ್ಷ ಕೆ. ಪಂಚಲಿಂಗಯ್ಯ ಮಾತಾಡುತ್ತಾ,ನೌಕರರು ತಮಗೆ ದೊರೆತ ಅವಕಾಶವನ್ನು ಒಗ್ಗಟ್ಟಿನಿಂದ ಶ್ರದ್ಧೆ, ಪ್ರಾಮಾಣಿಕತೆ ಮತ್ತು ಶಿಸ್ತಿನಿಂದ ಕರ್ತವ್ಯ ನಿರ್ವಹಿಸಿ, ದೊರೆಯಬೇಕಾದ ಎಲ್ಲಾ ಸವಲತ್ತುಗಳನ್ನು ಪಡೆಯಲು ಸರ್ವರೂ ಸಹಕರಿಸಬೇಕೆಂದು ಮನವಿಮಾಡಿದರು.
ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಂಡ್ಯ ಜಿಲ್ಲಾ ಹಾಪ್ ಕಾಮ್ಸ್ ಅಧ್ಯಕ್ಷ ಡಿ.ಕೃಷ್ಣೇಗೌಡ ಉಪಾಧ್ಯಕ್ಷ ಕಾಳಯ್ಯನವರನ್ನು ನೌಕರರ ಸಂಘದ ಪರವಾಗಿ ಅಭಿನಂದಿಸಲಾಯಿತು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅಭಿನಂದಿತರು, “ಹಾಪ್ ಕಾಮ್ಸ್ “ಗೆ ಒಳ್ಳೆಯ ಹೆಸರಿದೆ. ಈ ಹಿಂದೆ ಅತ್ಯುತ್ತಮವಾಗಿ ನಡೆದುಕೊಂಡು ಬಂದಿದೆ. ಹಾಗಾಗಿ ಮುಂದೆಯೂ ಸಂಘವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಎಲ್ಲರೂ ಪ್ರಾಮಾಣಿಕತೆ ಯಿಂದ ದುಡಿಯುವುದರ ಮೂಲಕ, ಸಂಘದಿಂದ ತಮಗೆ ದೊರೆಯಬೇಕಾದ ಎಲ್ಲಾ ಸವಲತ್ತುಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನೌಕರರ ಸಂಘದ,ಸಿ. ಶ್ರೀನಿವಾಸ್ ಡಿ. ಚಲುವಯ್ಯ ಬಿ. ದೇವರಾಜು, ಲಕ್ಷ್ಮಣಗೌಡ, ಕೃಷ್ಣ, ರವಿ, ನಾಗರಾಜು ಸ್ವಾಮಿ, ಶಂಕರ, ಸತೀಶ ಹೊಂಬೇಗೌಡ, ರಾಮಲಿಂಗೇಗೌಡ,ಕುಮಾರ, ಮಲ್ಲರಾಜು, ಚಲುವರಾಜು,ರಮೇಶ್ ಹಾಗೂ ಇತರೆ ನೌಕರರು ಉಪಸ್ಥಿತರಿದ್ದರು.