Sunday, May 5, 2024

ಪ್ರಾಯೋಗಿಕ ಆವೃತ್ತಿ

ಮಳವಳ್ಳಿ : ಕಾಂಗ್ರೆಸ್ ಪಕ್ಷ ತೊರೆದು ಜೆಡಿಎಸ್ ಸೇರ್ಪಡೆ

ಮತದಾನ ಇನ್ನೂ ಮೂರು ದಿನ ಇರುವಾಗಲೇ ಪಕ್ಷಾಂತರ ಪರ್ವ ಮುಂದುವರಿದ್ದು ಗ್ರಾ.ಪಂ ಸದಸ್ಯರು ಸೇರಿದಂತೆ ಹಲವರು ಕಾಂಗ್ರೆಸ್ ಪಕ್ಷ ತೊರೆದು ಜೆಡಿಎಸ್ ಸೇರ್ಪಡೆಯಾದರು.

ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಮಾಜಿ ಶಾಸಕ ಅನ್ನದಾನಿ ಹಾಗೂ ಯುವ ಘಟಕದ ಜಿಲ್ಲಾದ್ಯಕ್ಷ ರವಿ ಸಮ್ಮುಖದಲ್ಲಿ ಶೆಟ್ಟಹಳ್ಳಿಗ್ರಾ.ಪಂ ಸದಸ್ಯ ಚನ್ನಬಸವಣ್ಣ. ನಂಜುಂಡ, ಅಶ್ವಿನಿ ಕುಮಾರ್ ಸೇರಿದಂತೆ ಹಲವರು ಕಾಂಗ್ರೆಸ್ ತೊರೆದು ಜೆಡಿಎಸ್ ಪಕ್ಷ ಸೇರ್ಪಡೆಯಾದರು.

ನಂತರ ಮಾಜಿ ಶಾಸಕ ಅನ್ನದಾನಿ ಮಾತನಾಡಿ, ಜೆಡಿಎಸ್ ಸಿದ್ದಾಂತ ಕುಮಾರಣ್ಣ ಆದರ್ಶವನ್ನು ಮೆಚ್ಚಿ ಕಾಂಗ್ರೆಸ್ ಪಕ್ಷ ತೊರೆದು ಜೆಡಿಎಸ್ ಸೇರ್ಪಡೆ ಯಾಗಿದ್ದಾರೆ, ಎಂದರು.

ಈ ವೇಳೆ ಮಾಜಿ ಶಾಸಕ ಅನ್ನದಾನಿ, ಯುವ ಘಟಕದ ಜಿಲ್ಲಾದ್ಯಕ್ಷ ರವಿ ಇದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!