Saturday, May 18, 2024

ಪ್ರಾಯೋಗಿಕ ಆವೃತ್ತಿ

ಮದ್ದೂರು| ನಗರಕೆರೆ ಡೇರಿ ಅಧ್ಯಕ್ಷರಾಗಿ ರೂಪ, ಉಪಾಧ್ಯಕ್ಷರಾಗಿ ರಾಜಶೇಖರ್ ಆಯ್ಕೆ

ಮದ್ದೂರು ತಾಲ್ಲೂಕಿನ ನಗರಕೆರೆ ಹಾಲು ಉತ್ಪಾದಕರ ಸಂಘದ ಆಡಳಿತ ಮಂಡಳಿಗೆ ಮಂಗಳವಾರ (ಇಂದು) ನಡೆದ ಚುನಾವಣೆಯಲ್ಲಿ ತಲಾ ಏಳು ಮತಗಳನ್ನು ಪಡೆದು ಅಧ್ಯಕ್ಷರಾಗಿ ರೂಪ ಹಾಗೂ ಉಪಾಧ್ಯಕ್ಷರಾಗಿ ಎನ್ ಪಿ ರಾಜಶೇಖರ್ ಆಯ್ಕೆಯಾದರು.

ಅಧ್ಯಕ್ಷ ಸ್ಥಾನಕ್ಕೆ ಸ್ಪರ್ದಿಸಿದ್ದ ಪದ್ಮ ಹಾಗು ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ದಿಸಿದ್ದ ಧನಂಜಯ ತಲಾ ಐದು ಮತ ಪಡೆದು ಪರಭಾವಗೊಂಡರು. ಗ್ರಾಮದ ಯಾಜಮಾನರು ಹಾಲು ಉತ್ಪಾದಕರು ಹಾಗು ಮುಖಂಡರ ಸಮಕ್ಷಮ ರಾಜಿ ಸೂತ್ರ ರಚಿಸಿ ಅವಿರೋಧವಾಗಿ ನಿರ್ದೇಶಕರ ಆಯ್ಕೆ ನಡೆದಿತ್ತಾದರೂ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ವೇಳೆಗೆ ಚುನಾವಣೆ ಏರ್ಪಾಡುವ ಸಂದರ್ಭ ಎದುರಾಗಿ ಚುನಾವಣೆ ನಡೆಯಿತು.

ಇದಕ್ಕೂ ಮೊದಲು ಕಳೆದ ವಾರ ಇದೇ ಚುನಾವಣೆ ಸಭೆ ಕೋರಂ ಕೊರತೆಯಿಂದ ಮುಂದೂಡಲ್ಪಟ್ಟಿತ್ತು,
ನೂತನ ಅಧ್ಯಕ್ಷ‌ ಉಪಾಧ್ಯಕ್ಷರನ್ನುಗ್ರಾಮದ ಯಾಜಮಾನರಾದ ವಿಷಕಂಠಯ್ಯ, ಶಿವಲಿಂಗಯ್ಯ, ಶಿವರಾಮ್ ಅವರು ಅಭಿನಂದಿಸಿದರು.

ಈ ಸಂದರ್ಭದಲ್ಲಿ ಹಾಲು ಉತ್ಪಾದಕರ ಸಂಘದ ನೂತನ ನಿರ್ದೆಶಕರಾದ ಶಂಕರೇಗೌಡ ಶೇಖರ ಕರಿಯಪ್ಪ ಹಾಗೂ ಮುಖಂಡರಾದ ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ನ.ಲಿ.ಕೃಷ್ಣ, ಎ ಪಿ ಎಮ್ ಸಿ ಮಾಜಿ ಉಪಾಧ್ಯಕ್ಷ ಎನ್ ಆರ್ ಪ್ರಸನ್ನ, ಪ್ರಸನ್ನ ಪಾರ್ವತಾಂಭ ಟ್ರಸ್ಟ್‌ ಧರ್ಮದರ್ಶಿ ರಾಮಲಿಂಗಯ್ಯ, ಮುಖಂಡರಾದ ನಾಗರಾಜು, ಎನ್ ಎಮ್ ಕೃಷ್ಣ, ಗ್ರಾ ಪಂ ಸದಸ್ಯ ಹನುಮೇಗೌಡ, ಯುವ ಮುಖಂಡ ಪ್ರಸನ್ನ, ಎನ್ ಎಲ್ ದೊಡ್ಡಲಿಂಗೇಗೌಡ, ಎನ್ ಎಸ್ ಜಯರಾಮ್, ದೊಡ್ಡಚನ್ನೇಗೌಡ, ಕುಮಾರ, ವಿಕಾಸ್ ಗೌಡ, ಸಿದ್ದೇಶ್, ಚಿರಾಗ್ ಎನ್ ಬಿ ಹಾಗೂ ರಾಜಶೇಖರ ಎನ್ ಆರ್ ಹಾಜರಿದ್ದರು

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!