Friday, May 17, 2024

ಪ್ರಾಯೋಗಿಕ ಆವೃತ್ತಿ

ತಮ್ಮದೇ ಪಕ್ಷದ ಸಂಸದನ ಪಾರ್ಥಿವ ಶರೀರದ ದರ್ಶನ ಮಾಡದ ಮೋದಿ: ಕಾಂಗ್ರೆಸ್ ಕಿಡಿ

ಪ್ರಧಾನಿ ಮೋದಿಯವರು ನಿನ್ನೆ ಕರ್ನಾಟಕದಲ್ಲೇ ಇದ್ದರು, ಕರ್ನಾಟಕ ಕಂಡ ಮುತ್ಸದ್ದಿ ರಾಜಕಾರಿಣಿ, ಶೋಷಿತ ಸಮುದಾಯಗಳ ಗಟ್ಟಿ ಧ್ವನಿಯಾಗಿದ್ದ ಶ್ರೀನಿವಾಸ್ ಪ್ರಸಾದ್ ಅವರು ತೀರಿಕೊಂಡಿದ್ದು ಪ್ರಧಾನಿಯಯವರಿಗೂ ತಿಳಿದಿತ್ತು, ಆದರೂ ತಮ್ಮದೇ ಪಕ್ಷದ ಸಂಸದನ ಪಾರ್ಥಿವ ಶರೀರ ದರ್ಶನ ಮಾಡದೇ ಅವಮಾನಿಸಿದ್ದಾರೆಂದು ಕಾಂಗ್ರೆಸ್ ಟೀಕಿಸಿದೆ.

ಶ್ರೀನಿವಾಸ್ ಪ್ರಸಾದ್ ಅವರು ಮೋದಿಯವರ ಸಂಸತ್ ಸಹೋದ್ಯೋಗಿ ಹಾಗೂ ಅವರದ್ದೇ ಪಕ್ಷದ ಹಾಲಿ ಸಂಸದ. ಹೀಗಿದ್ದೂ ಶ್ರೀನಿವಾಸ್ ಪ್ರಸಾದ್ ಅವರ ಪಾರ್ಥಿವ ಶರೀರ ನೋಡಿ ಗೌರವ ಸೂಚಿಸುವ ಕನಿಷ್ಠ ಸೌಜನ್ಯ ತೋರಲಿಲ್ಲ ಮೋದಿ. ಇದು ಮೋದಿಯವರಿಗೆ ಶೋಷಿತ ಸಮುದಾಯಗಳ ಬಗ್ಗೆ ಇರುವ ತಾತ್ಸಾರವೋ, ಅಥವಾ ನಾಯಕರನ್ನು ಬಳಸಿ ಬಿಸಾಡುವ ಕುಯುಕ್ತಿಯ ಬುದ್ಧಿಯೊ? ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.

“>

ಶ್ರೀನಿವಾಸ್ ಪ್ರಸಾದ್ ಅವರ ಸೈದ್ದಂತಿಕ ಬಿನ್ನತೆಯ ಕಾರಣಕ್ಕೆ ತೋರಿದ ದ್ವೇಷವೋ? ಬಿಜೆಪಿ ಶ್ರೀನಿವಾಸ್ ಪ್ರಸಾದ್ ರನ್ನು ಪಕ್ಷಕ್ಕೆ ಸೇರಿಸಿಕೊಂಡ ನಂತರ ಮೂಲೆಗುಂಪು ಮಾಡಿತ್ತು, ಈಗ ಮೋದಿಯವರು ನಿರ್ಲಕ್ಷ್ಯ ಮಾಡಿದ್ದಾರೆ. ಒಬ್ಬ ಹಿರಿಯ ಮುತ್ಸದ್ದಿ ನಾಯಕನಿಗೆ ಬಿಜೆಪಿ ಮತ್ತು ಮೋದಿ ಕೊಡುವ ಗೌರವ ಇದೇನಾ? ಎಂದು ಕಾಂಗ್ರೆಸ್ ಕಿಡಿಕಾರಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!