ಮಳವಳ್ಳಿ ಪಟ್ಟಣ ಅಭಿವೃದ್ಧಿಯ ಚಿತ್ರಣವನ್ನೆ ಬದಲಾಯಿಸಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದೆಂದು ಶಾಸಕ ಪಿ.ಎಂ ನರೇಂದ್ರಸ್ವಾಮಿ ತಿಳಿಸಿದರು.
ಮಳವಳ್ಳಿ ಪಟ್ಟಣದ ಪುರಸಭೆ ವತಿಯಿಂದ ಅಮೃತ ಯೋಜನೆ ಅಡಿಯಲ್ಲಿ ಸುಮಾರು 2 ಕೋಟಿ ವೆಚ್ಚದಲ್ಲಿ ರಸ್ತೆ ಮತ್ತು ಚರಂಡಿ ನಂತರ ಶುದ್ದ ನೀರಿನ ಘಟಕಕ್ಕೆ ಚಾಲನೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರೆವೇರಿಸಿ ಮಾತನಾಡಿದ ಅವರು, ಸಕಾ೯ರದ ಸೌಲಭ್ಯಗಳನ್ನು ಬಳಸಿಕೊಂಡು ವಿಕಲಚೇತನರು ಸ್ವಾಭಿಮಾನದ ಜೀವನ ಸಾಗಿಸಲು ಮುಂದಾಗಬೇಕೆಂದು ಹೇಳಿದರು.ಬರಗಾಲ ಎದುರಾಗಿರುವುದರಿಂದ ನೀರಿನ ಸಮಸ್ಯರ ಎದುರಾಗಿದ್ದು, ಮಿತವಾಗಿ ಬಳಸಬೇಕೇಂದು ತಿಳಿಸಿದರು.
ಪಟ್ಟಣದ ಪುರಸಭೆ ವತಿಯಿಂದ ವಿಕಲಚೇತನಿಗೆ ನೀಡಲಾದ ತ್ರಿಚಕ್ರ ವಾಹನಗಳನ್ನು ಶಾಸಕ ಪಿ ಎಂ ನರೇಂದ್ರಸ್ವಾಮಿ ವಿತರಿಸಿದರು.
ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯರಾದ ಪ್ರಮೀಳಾ ಬಸವರಾಜು, ಪುಟ್ಟಸ್ವಾಮಿ, ಮಹೇಶ್ವರಿ, ರಮೇಶ್, ರಾಜಶೇಖರ್, ಶಿವಸ್ವಾಮಿ, ಪುರಸಭೆ ಮುಖ್ಯ ಅಧಿಕಾರಿ ನಾಗರತ್ನ, ಮುಖಂಡರಾದ ಕೃಷ್ಣ, ದೊಡ್ಡಯ್ಯ, ರಮೇಶ್, ಅಂಕರಾಜು ಸೇರಿದಂತೆ ಪುರಸಭೆ ಸಿಬ್ಬಂದಿಗಳು ಹಾಜರಿದ್ದರು.