ಕಾಂಗ್ರೆಸ್ ಪಕ್ಷದ ಪ್ರಜಾ ಧ್ವನಿ ಯಾತ್ರೆಯು ಜ.27ರಂದು ಮಂಡ್ಯಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ಜ.22ರಂದು ಮದ್ಯಾಹ್ನ 2 ಗಂಟೆಗೆ ಪಟ್ಟಣದ ರೈತ ಸಭಾಂಗಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಪೂರ್ವಭಾವಿ ಸಭೆಯೂ ಕೆಪಿಸಿಸಿ ಉಪಾಧ್ಯಕ್ಷ ಪಿ.ಎಂ ನರೇಂದ್ರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಪೂರ್ವಭಾವಿ ಸಭೆಗೆ ಕಾಂಗ್ರೆಸ್ ಪಕ್ಷದ ಎಲ್ಲಾ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಬೇಕೆಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೇವರಾಜ್ ಮನವಿ ಮಾಡಿದರು.
ವಾರ್ಡ್ ಗಳ ಭೇಟಿ
ಕಾಂಗ್ರೆಸ್ ಪಕ್ಷ ಸಂಘಟನೆ ಹಿನ್ನೆಲೆಯಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಪಿ.ಎಂ ನರೇಂದ್ರಸ್ವಾಮಿ ಅವರು ಜ.22ರಿಂದ ಜ.24ರವರೆಗೆ ಪಟ್ಟಣದ ಎಲ್ಲಾ ವಾರ್ಡ್ ಗಳಲ್ಲಿರುವ ಕಾರ್ಯಕರ್ತರ ಸಭೆ ನಡೆಸಲಿದ್ದಾರೆ. ಜ.22ರಂದು ಬೆಳಿಗ್ಗೆ 10.30 ಗಂಟೆಗೆ 5ನೇ ವಾರ್ಡ್ ಉಗ್ರಣಪುರದದೊಡ್ಡಿ, ಬೆಳಿಗ್ಗೆ 11.30 ಗಂಟೆಗೆ 6ನೇ ವಾರ್ಡ್,12ಗಂಟೆಗೆ 4ನೇ ವಾರ್ಡ್, 1ಗಂಟೆಗೆ 2ನೇ ವಾರ್ಡ್, ಮದ್ಯಾಹ್ನ 2 ಗಂಟೆಗೆ 7ನೇ ವಾರ್ಡ್, ಸಂಜೆ 4 ಗಂಟೆಗೆ 1ನೇ ವಾರ್ಡ್, ಸಂಜೆ 5 ಗಂಟೆಗೆ 8ನೇ ವಾರ್ಡ್ ಗಳಲ್ಲಿ ಸಭೆ ನಡೆಸಲಿದ್ದಾರೆ.
ಜ.23ರಂದು ಬೆಳಿಗ್ಗೆ 10.30 ಗಂಟೆಗೆ 11ನೇವಾರ್ಡ್, 11.30ಗಂಟೆಗೆ 15ನೇವಾರ್ಡ್, ಮದ್ಯಾಹ್ನ 12 ಗಂಟೆಗೆ 12ನೇ ವಾರ್ಡ್, 1 ಗಂಟೆಗೆ 13,14,16ನೇ ವಾರ್ಡ್ ಮುಸ್ಲಿಂ ಕಾಲೋನಿ, 2 ಗಂಟೆಗೆ ದೇವಾಂಗ ಬೀದಿ, 3 ಗಂಟೆಗೆ 16,17,18ನೇ ವಾರ್ಡ್ 3.30. ಗಂಟೆಗೆ 9, 10ನೇ ವಾರ್ಡ್ಗೆ ಆಗಮಿಸಲಿದ್ದಾರೆ.
24ರಂದು ಬೆಳಿಗ್ಗೆ 10.30 ಗಂಟೆಗೆ 22ನೇ ವಾರ್ಡ್, 11.30 ಗಂಟೆಗೆ 23ನೇ ವಾರ್ಡ್, 12ಗಂಟೆಗೆ 19ನೇವಾರ್ಡ್, 12.30 ಗಂಟೆಗೆ 21ನೇ ವಾರ್ಡ್,1ಗಂಟೆಗೆ 20ನೇವಾರ್ಡ್ ಹಾಗೂ 1.30 ಗಂಟೆಗೆ ಬಸವಲಿಂಗಪ್ಪನಗರದಲ್ಲಿ ಸಭೆ ನಡೆಸಲಿದ್ದಾರೆ. ಪ್ರತಿಯೊಂದು ವಾರ್ಡ್ ಗಳಿಗೂ ಪಾದಯಾತ್ರೆಯ ಮೂಲಕವೇ ಸಂಚರಿಸಲಿದ್ದು, ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಪಿ.ಎಂ.ನರೇಂದ್ರಸ್ವಾಮಿ ಅಭಿಮಾನಿಗಳು ಸಭೆಯಲ್ಲಿ
ಭಾಗವಹಿಸಬೇಕೆಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೇವರಾಜು ಪ್ರಕಟಣೆಯಲ್ಲಿ ಕೋರಿದ್ದಾರೆ.