ಲೋಕಸಭೆಯಲ್ಲಿ ಮುಸ್ಲಿಂ ಸಂಸದರ ವಿರುದ್ಧ ಕೋಮುವಾದಿ ಹೇಳಿಕೆ ನೀಡಿದ ಕೆಲವೇ ದಿನಗಳಲ್ಲಿ ರಮೇಶ್ ಬಿಧುರಿ ಅವರನ್ನು ಟೋಂಕ್ನ ಚುನಾವಣಾ ಉಸ್ತುವಾರಿಯಾಗಿ ಬಿಜೆಪಿ ನೇಮಿಸಿದೆ.
ಸಂಸತ್ತಿನಲ್ಲಿ ಮುಸ್ಲಿಂ ಸಂಸದರೊಬ್ಬರ ವಿರುದ್ಧ ಕೋಮುವಾದಿ ಟೀಕಾಪ್ರಹಾರ ನಡೆಸಿದ ಕೆಲವೇ ದಿನಗಳ ನಂತರ ಬಿಜೆಪಿಯು ಲೋಕಸಭಾ ಸಂಸದ ರಮೇಶ್ ಬಿಧುರಿ ಅವರನ್ನು ರಾಜಸ್ಥಾನದ ಟೋಂಕ್ ಜಿಲ್ಲೆಯ ಚುನಾವಣಾ ಉಸ್ತುವಾರಿಯಾಗಿ ನೇಮಿಸಿದೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ಬುಧವಾರ ವರದಿ ಮಾಡಿದೆ.
राजस्थान प्रदेश भाजपा कार्यालय जयपुर में ज़िला टोंक की समन्वय बैठक में प्रदेश अध्यक्ष श्री @cpjoshiBJP जी द्वारा संगठनात्मक कार्यों व चुनाव की तैयारियों के साथ सेवा सप्ताह के कार्यक्रमों सहित आगामी कार्यकर्ताओं के प्रवास योजनाओं की जानकारी लेते हुए। pic.twitter.com/wK63ctXR6X
— Ramesh Bidhuri (@rameshbidhuri) September 27, 2023
“>
ಸೆಪ್ಟೆಂಬರ್ 21ರಂದು ಲೋಕಸಭೆಯಲ್ಲಿ ಭಾರತದ ಚಂದ್ರಯಾನ-3, ಚಂದ್ರಯಾನ ಕಾರ್ಯಾಚರಣೆಯ ಯಶಸ್ಸಿನ ಚರ್ಚೆಯ ಸಂದರ್ಭದಲ್ಲಿ ಬಿಧುರಿ ಬಹುಜನ ಸಮಾಜ ಪಕ್ಷದ ಶಾಸಕ ಡ್ಯಾನಿಶ್ ಅಲಿಯನ್ನು “ಮುಲ್ಲಾ ಭಯೋತ್ಪಾದಕ”, “ಪಿಂಪ್” ಮತ್ತು “ಕತ್ವಾ” ಸುನ್ನತಿ ಎಂದು ಕರೆದು ಗದ್ದಲ ಎಬ್ಬಿಸಿದ್ದರು.
ಬಿಧುರಿ ಹೇಳಿಕೆಗೆ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿರೋಧ ಪಕ್ಷಗಳು ಕೋರಿದ್ದು, ಅವರ ಹೇಳಿಕೆಗಳು ದ್ವೇಷಪೂರಿತ ಭಾಷಣವಾಗಿದೆ ಎಂದು ಹೇಳಿದ್ದವು. ಬಿಧುರಿ ಅವರು ಇಂತಹ ವರ್ತನೆಯನ್ನು ಪುನರಾವರ್ತಿಸಿದರೆ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಎಚ್ಚರಿಸಿದ್ದಾರೆ. ಬಿಜೆಪಿಯು ಭಿದುರಿಗೆ ಶೋಕಾಸ್ ನೋಟಿಸ್ ನೀಡಿದ್ದು, ಅವರ ಟೀಕೆಗಳಿಗೆ ವಿವರಣೆ ನೀಡುವಂತೆ ಕೇಳಿದೆ.
ಬಿಜೆಪಿಯ ಟೋಂಕ್ ಅಧ್ಯಕ್ಷ ರಾಜೇಂದ್ರ ಪರಾನಾ ಅವರು ಬುಧವಾರ ಬಿಧುರಿ ಅವರನ್ನು ಜಿಲ್ಲಾ ಚುನಾವಣಾ ಉಸ್ತುವಾರಿಯಾಗಿ ನೇಮಿಸಿದ್ದಾರೆ.
ಜೈಪುರದ ರಾಜ್ಯ ಕಚೇರಿಯಲ್ಲಿ ರಾಜ್ಯಾಧ್ಯಕ್ಷ ಸಿಪಿ ಜೋಶಿ ಮತ್ತು ಇತರರೊಂದಿಗೆ ಸಭೆ ನಡೆಸಿರುವ ಫೋಟೊಗಳನ್ನು ಬಿಧುರಿ ಹಂಚಿಕೊಂಡಿದ್ದಾರೆ.
”ಸಂಸತ್ತಿನಲ್ಲಿ ಅಲಿ ವಿರುದ್ಧ ದಾಳಿ ಮಾಡಿದ್ದಕ್ಕಾಗಿ ಬಿಧುರಿ ಅವರಿಗೆ ಬಿಜೆಪಿ ಬಹುಮಾನ ನೀಡಿದೆ” ಎಂದು ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಹೇಳಿದ್ದಾರೆ.
”ಬಿಜೆಪಿ ‘ದ್ವೇಷ’ಕ್ಕೆ ಪ್ರತಿಫಲ ನೀಡುತ್ತದೆ… ಟೋಂಕ್ನಲ್ಲಿ ಮುಸ್ಲಿಂ ಜನಸಂಖ್ಯೆಯು 29.25% ಆಗಿದೆ. ರಾಜಕೀಯ ಲಾಭಾಂಶಕ್ಕಾಗಿ ‘ದ್ವೇಷ’ವನ್ನು ಬಳಸುತ್ತದೆ” ಎಂದು ಸಿಬಲ್ ಹೇಳಿದ್ದಾರೆ.
”ಶೋಕಾಸ್ ನೋಟಿಸ್ ನೀಡಿರುವ ವ್ಯಕ್ತಿಗೆ ಬಿಜೆಪಿ ಹೊಸ ಜವಾಬ್ದಾರಿ ನೀಡುವುದು ಹೇಗೆ? ಎಂದು ತೃಣಮೂಲ ಕಾಂಗ್ರೆಸ್ ಸಂಸದ ಮಹುವಾ ಮೊಯಿತ್ರಾ ಪ್ರಶ್ನಿಸಿದ್ದಾರೆ.
”ನರೇಂದ್ರ ಮೋದಿ ಜೀ – ಇದು ಅಲ್ಪಸಂಖ್ಯಾತರಿಗಾಗಿ ನಿಮ್ಮ ಸ್ನೇಹ ಯಾತ್ರೆಯೇ? ನಿಮ್ಮ ಪ್ರೀತಿಯ ಪ್ರಚಾರವೇ?” ಎಂದು ಕೇಳಿದ್ದಾರೆ. ಬಿಜೆಪಿಯ ”ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್” ಘೋಷಣೆ ಪೊಳ್ಳು ಎಂದು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಬರೆದಿದ್ದಾರೆ.