Saturday, May 18, 2024

ಪ್ರಾಯೋಗಿಕ ಆವೃತ್ತಿ

ಶಾಲಾ ಮಕ್ಕಳಿಗೆ ಪಠ್ಯ ಪುಸ್ತಕ ವಿತರಿಸಿದ ಶಾಸಕ ರವಿಕುಮಾರ್

ಮಂಡ್ಯ ನಗರದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕವನ್ನು ಶಾಸಕ ಪಿ. ರವಿಕುಮಾರ್ ಗಣಿಗ ವಿತರಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಗಣಿಗ ರವಿಕುಮಾರ್ ಮಾತನಾಡಿದ ಅವರು, ಸರ್ಕಾರಿ ಶಾಲೆಯನ್ನು ಅಭಿವೃದ್ಧಿಪಡಿಸಿ ಮುಂದೆ ಸರ್ಕಾರಿ ಶಾಲೆಗೆ ಪೈಪೋಟಿಯಲ್ಲಿ ಸೇರುವಂತಾಗಬೇಕು, ಖಾಸಗಿ ಶಾಲೆಗಿಂತ ಉತ್ತಮ ಶಿಕ್ಷಣ ಸಿಗುವಂತಾಗಬೇಕು, ಆದ್ದರಿಂದ ಅಭಿವೃದ್ಧಿ ಪಡಿಸಲು ಶಿಕ್ಷಣಾಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ಹೇಳಿದರು.

ಎ ಎಸ್ ಪಿ ತಿಮ್ಮಯ್ಯ ಮಾತನಾಡಿ, ಮುಚ್ಚುವ ಸ್ಥಿತಿಯಲ್ಲಿದ್ದ ಶಾಲೆಯನ್ನು ಮುನವರ್ ಖಾನ್ ನೇತೃತ್ವದಲ್ಲಿ ನವೀಕರಣಗೊಳಿಸಿ, ಹೆಚ್ಚಿನ ಮಕ್ಕಳು ದಾಖಲಾಗಲು ಎಲ್ಲರೂ ಸಹಕರಿಸಿದ್ದಿರಿ ಎಂದು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಡಿಡಿಪಿಐ ಜವರೇಗೌಡ, ನಗರಸಭೆ ಸದಸ್ಯರಾದ ನಹೀಂ, ಅರುಣ್ ಕುಮಾರ್, ಪೂರ್ಣಿಮಾ, ಸೌಭಾಗ್ಯ, ಮುಖಂಡರಾದ ಚಿದಂಬರ್ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!