ಸ್ವ ಉದ್ಯೋಗದಿಂದ ಹಲವು ನಿರುದ್ಯೋಗಿಗಳಿಗೆ ಉದ್ಯೋಗ ದೊರಕುತ್ತಿರುವುದು ಉತ್ತಮ ಬೆಳವಣಿಗೆ ಎಂದು ಜನತಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ವಿಜಯ್ ಆನಂದ್ ಹೇಳಿದರು.
ಮಂಡ್ಯ ನಗರದ ಗುತ್ತಲು ರಸ್ತೆಯ ಮೈಶುಗರ್ ವೃತ್ತದಲ್ಲಿ ನಿರಂತರ ಬೇಕ್ಸ್ ಸಂಸ್ಥೆಯಿಂದ ನೂತನವಾಗಿ ಆರಂಭವಾದದ ನಿರಂತರ ಬೇಕ್ಸ್ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.
ಯುವಕರು ಉದ್ಯಮಶೀಲತೆ ಗುಣಗಳನ್ನು ಬೆಳೆಸಿಕೊಳ್ಳಬೇಕು.ಇಂದು ನಿರುದ್ಯೋಗ ಸಮಸ್ಯೆ ಸಾಕಷ್ಟಿದೆ. ಈ ರೀತಿ ಸ್ವ ಉದ್ಯೋಗದಿಂದ ಹಲವಾರು ನಿರುದ್ಯೋಗಿಗಳಿಗೆ ಕೆಲಸ ನೀಡಬಹುದು. ಬ್ಯಾಂಕ್ ಸೌಲಭ್ಯ ಪಡೆದುಕೊಂಡು ಯುವ ಉದ್ಯಮಿ ಸುಮಂತ್ ಸಾಧನೆ ಮಾಡಲು ಮುಂದಾಗಿ, ನಿರುದ್ಯೋಗಿಗಳಿಗೆ ಉದ್ಯೋಗ ನೀಡುತ್ತಿರುವುದು, ಉತ್ತಮ ಬೆಳವಣಿಗೆಯಾಗಿದೆ.ಅವರು ಈ ಕ್ಷೇತ್ರದಲ್ಲಿ ಮತ್ತಷ್ಟು ಸಾಧನೆ ಮಾಡಲಿ ಎಂದು ಶುಭ ಹಾರೈಸಿದರು.
ಸ್ಥಳೀಯ ಗ್ರಾಹಕರು ನಿರಂತರ ಬೇಕ್ಸ್ ಗೆ ಸಂಪೂರ್ಣ ಸಹಕಾರ ನೀಡಬೇಕು, ಯುವ ಸಮೂಹ ಜನ್ಮದಿನವನ್ನು ರಸ್ತೆಯಲ್ಲಿ, ಬೈಕ್ನಲ್ಲಿ ಕೇಕ್ಗಳನ್ನು ಕಟ್ ಮಾಡಿ ಆಚರಿಸುವುದು ಕಂಡಿದ್ದೇವೆ. ಉಚಿತವಾಗಿ ನಿರಂತರ ಬೇಕ್ಸ್ ಹಾಲ್ ಸಿದ್ದವಿದ್ದು, ಜನ್ಮದಿನ ಆಚರಣೆ ಮಾಡಿಕೊಳ್ಳುವವರು ಇದರ ಸದುಪಯೋಗ ಪಡಿಸಿಕೊಳ್ಳಬಹುದು ಎಂದು ಹೇಳಿದರು.
ನಂತರ ಬೇಕರಿ ಉದ್ಯಮಿ ಸುಮಂತ್ ಮಾತನಾಡಿ, ಗ್ರಾಹಕರಿಗೆ ಗುಣಮಟ್ಟದ ಕೇಕ್ಗಳು, ಸಿಹಿ-ತಿನಿಸುಗಳು, ಐಸ್ ಕ್ರೀಮ್ ಲಭ್ಯವಿದ್ದು, ಶುಚಿ – ರುಚಿಯಾದ ಬೇಕರಿ ತಿಸಿಸುಗಳು ರಿಯಾಯಿತಿ ದರದಲ್ಲಿ ಲಭ್ಯವಿವೆ ಎಂದರು
ಕಾರ್ಯಕ್ರಮದಲ್ಲಿ ಬೇಕರಿ ಅರವಿಂದ್ ಕಿರಗಂದೂರು ಸಂಜೀವ್, ಯುವ ಮುಖಂಡ ಗುರು ಆತ್ಮಾನಂದ, ಸುರೇಶ್ ಗ್ರಾಹಕರು ಹಾಜರಿದ್ದರು.