ಕೆ.ಆರ್.ಪೇಟೆಯ ಕನಕ ಜಯಂತ್ಯೋತ್ಸವ, ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಕನಕ ಗುರುಪೀಠದ ಶಿವಾನಂದ ಪುರಿ ಸ್ವಾಮೀಜಿ ಸಿದ್ದರಾಮಯ್ಯ ಅವರನ್ನು ಆಧುನಿಕ ಕನಕದಾಸ ಎಂದು ಹೊಗಳಿದರು.
ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಸರ್ವ ಜನಾಂಗದ ಜನರಿಗೆ ಹಲವು ಯೋಜನೆಗಳನ್ನು ರೂಪಿಸಿದ್ದರು. ಮತ್ತೆ ಭಾಗ್ಯಗಳು ಬೇಕಂದ್ರೆ ಸಿದ್ದರಾಮಯ್ಯ ಇರಬೇಕು. ನಾನು ಎಲ್ಲರ ಪರವಾಗಿ ಕೇಳ್ತಿದ್ದೀನಿ, ಮತ್ತೊಮ್ಮೆ ಸಿದ್ದರಾಮಯ್ಯ ಅವರನ್ನು ಅಧಿಕಾರಕ್ಕೆ ತರಬೇಕು ಎಂದು ಮನವಿ ಮಾಡಿದರು.