ಶ್ರೀರಂಗಪಟ್ಟಣ ತಾಲೂಕಿನ ಗೌಡಹಳ್ಳಿ ಗೇಟ್ ಬಳಿ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಪರಿಚಿತ ವಾಹನ ಚಿರತೆಯೊಂದು ಬಲಿಯಾಗಿರುವ ಘಟನೆ ಇಂದು (ಗುರುವಾರ) ರಾತ್ರಿ 7.30ರ ಸುಮಾರಿಗೆ ನಡೆದಿದೆ
ಸುಮಾರು ಒಂದುವರೆ ವರ್ಷದ ಪ್ರಾಯದ ಹೆಣ್ಣು ಚಿರತೆ ಬಲಿಯಾಗಿದ್ದು ಶೆಟ್ಟಹಳ್ಳಿ ಮೀಸಲು ಅರಣ್ಯ ಪ್ರದೇಶದಲ್ಲಿರುವ ಚಿರತೆ ಎಂದು ಗುರುತಿಸಲಾಗಿದೆ. ಹೆದ್ಧಾರಿಗೆ ಬಂದ ಚಿರತೆಯನ್ನು ಅತಿವೇಗದಲ್ಲಿ ಬರುತ್ತಿದ್ದ ಅಪರಿಚಿತ ವಾಹನವೊಂದು ಹೊಡೆದುಕೊಂಡು ಹೋದ ಪರಿಣಾಮ ಚಿರತೆ ಸ್ಥಳದಲ್ಲೆ ಸಾವನ್ನಪ್ಪಿದೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.