Sunday, May 19, 2024

ಪ್ರಾಯೋಗಿಕ ಆವೃತ್ತಿ

ಮದ್ದೂರು| ಕಾಡಾನೆಗಳ ಹಿಂಡು ಪ್ರತ್ಯಕ್ಷ : ಗ್ರಾಮಸ್ಥರು ಹೊಲ- ಗದ್ದೆಗಳಿಗೆ ತೆರಳದಂತೆ ಸೂಚನೆ ನೀಡಿದ ಅರಣ್ಯ ಇಲಾಖೆ

ವರದಿ : ನ.ಲಿ.ಕೃಷ್ಣ

ಮದ್ದೂರು ತಾಲ್ಲೂಕಿನ ಅಜ್ಜಹಳ್ಳಿ ಗ್ರಾಮದ ಕಬ್ಬಿನ ಗದ್ದೆಗಳಲ್ಲಿ ಬೀಡು ಬಿಟ್ಟಿರುವ ಅನೆಗಳ ಹಿಂಡನ್ನು ಇಂದು ರಾತ್ರಿ ಕಾರ್ಯಾಚರಣೆ ನಡೆಸಿ, ಕಾಡಿಗೆ ಅಟ್ಟುವ ಕೆಲಸ ಮಾಡಲಾಗುವುದು ಎಂದು ಮದ್ದೂರು ತಾಲ್ಲೂಕು  ಆರಣ್ಯಾಧಿಕಾರಿ ಗವಿಯಪ್ಪ ತಿಳಿಸಿದರು.

ನುಡಿ ಕರ್ನಾಟಕ.ಕಾಂನೊಂದಿಗೆ ಮಾತನಾಡಿದ ಅವರು, ಈ ಕುರಿತು ಕ್ಯಾತಘಟ್ಟ ಗ್ರಾ ಪಂ ನಲ್ಲಿ ಅಧಿಕಾರಿಗಳ ಸಭೆ ನಡೆಸಿ ಕ್ಯಾತಘಟ್ಟ ಗ್ರಾ ಪಂ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿಯು ಅನೆ ಲಗ್ಗೆ ಇಟ್ಟಿರುವ ಸುದ್ದಿ ಪ್ರಚುರ ಪಡಿಸಿ ಜನರ ಸುರಕ್ಷತೆಗೆ ಮತ್ತು ಅನೆಗಳು ಬೀಡು ಬಿಟ್ಟಿರುವ ಸ್ಥಳದಿಂದ ದೂರು ಇರುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಕ್ಯಾತಘಟ್ಟ ಆಸುಪಾಸಿನ ಗ್ರಾಮ ಪಂಚಾಯಿತಿಗಳಾದ ನಗರಕೆರೆ, ಚಿಕ್ಕರಸಿನಕೆರೆ, ಕೆ.ಬೆಳ್ಳೂರು. ಆಲೂರು ಸೇರಿದಂತೆ ಇತರೆ ಪಂಚಾಯಿತಿ ಪಿ ಡಿ ಓ ಗಳಿಗೂ ಸೂಚನೆ ನೀಡಲಾಗಿದ್ದು, ಕಾಡಾನೆಗಳು ಲಗ್ಗೆ ಇಟ್ಟಿರುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ, ಸುರಕ್ಷಿತ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಲಾಗಿದೆ. ಕತ್ತಲಲ್ಲಿ ಹೊಲ ಗದ್ದೆಗಳಿಗೆ ತೆರಳದಂತೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

ಗ್ರಾ ಪಂ ಪ್ರಕಟಣೆ

ಕ್ಯಾತಘಟ್ಟ ಗ್ರಾ ಪಂ ವತಿಯಿಂದ ಹೀಗಾಗಲೆ ಕಾಡಾನೆಗಳು ಬಂದಿರುವುದಿರಂದ ಜನರು ಸುರಕ್ಷಿತವಾಗಿರಬೇಕೆಂಬ  ಪ್ರಚಾರ ಕಾರ್ಯ ಆರಂಭಿಸಲಾಗಿದೆ ಎಂದು ಪಿ ಡಿ ಓ ನಾಗೇಶ್ ತಿಳಿಸಿದ್ದಾರೆ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!