Sunday, May 5, 2024

ಪ್ರಾಯೋಗಿಕ ಆವೃತ್ತಿ

ಕರ್ನಾಟಕಕ್ಕೆ ಮೋದಿ ಸರ್ಕಾರ ಮಾಡುತ್ತಿರುವ ವಂಚನೆಯ ಲೆಕ್ಕಾಚಾರ

ಶಿವಸುಂದರ್

( ಮುಂದುವರಿದ ಭಾಗ – 2)

ಈಗ ಈ ಎಲ್ಲಾ ಕಾರಣಗಳಿಂದ ಮೋದಿ ಸರ್ಕಾರ ಕರ್ನಾಟಕಕ್ಕೆ ಮಾಡುತ್ತಿರುವ ಹಣಕಾಸು ವಂಚನೆಯ ಲೆಕ್ಕಾಚಾರ ಮಾಡೊಣ.

15 ನೇ ಹಣಕಾಸು ಅಯೋಗದ ಪ್ರಕಾರ ಮುಂದಿನ ಐದು ವರ್ಷಗಳಲ್ಲಿ ಕೇಂದ್ರೀಯ ತೆರಿಗೆಯ ಪ್ರಮಾಣ 135 ಲಕ್ಷ ಕೋಟಿಗಳಾಗಲಿವೆ. ಅದರಲ್ಲಿ ಮೋದಿ ಸರ್ಕಾರವೇ ಹೇಳುವಂತೆ ಶೇ.41 ರಷ್ಟು ರಾಜ್ಯಗಳ ಪಾಲಾಗಿದ್ದಿದ್ದರೆ ರಾಜ್ಯಗಳಿಗೆ ಮುಂದಿನ ಐದು ವರ್ಷಗಳಲ್ಲಿ ಮೋದಿ ಸರ್ಕಾರ 55 ಲಕ್ಷ ಕೋಟಿ ರೂಗಳನ್ನು ವರ್ಗಾಯಿಸಬೇಕಿತ್ತು.

ಅದರಲ್ಲಿ ಕರ್ನಾಟಕದ ಪಾಲು ಶೇ.4.71 ಅಗಿಯೇ ಉಳಿದಿದ್ದರೆ ಕರ್ನಾಟಕಕ್ಕೆ ಮುಂದಿನ ಐದು ವರ್ಷಗಳಲ್ಲಿ 2.6 ಲಕ್ಷ ಕೋಟಿಗಳು ಸಿಗಬೇಕಿತ್ತು.ಅಂದರೆ ಕೇಂದ್ರವು ಕರ್ನಾಟಕಕ್ಕೆ ವರ್ಷಕ್ಕೆ 51,000 ಕೋಟಿ ರೂಗಳನ್ನು ವರ್ಗಾಯಿಸಬೇಕಿತ್ತು.

ಆದರೆ ಈಗ ರಾಜ್ಯ ಸಭೆಯಲ್ಲಿ ಕೇಂದ್ರವೇ ಒಪ್ಪಿಕೊಂಡಂತೆ ಕೇಂದ್ರದ ತೆರಿಗೆಯಲ್ಲಿ ಸೆಸ್ ಅಂದರೆ ರಾಜ್ಯಗಳ ಹಂಚಿಕೊಳ್ಳದ ಪಾಲು ಶೇ. 28.1 . ಆದ್ದರಿಂದ ಕೇಂದ್ರವು ರಾಜ್ಯಗಳ ಜೊತೆ ಹಂಚಿಕೊಳ್ಳುವುದು 55 ಲಕ್ಷ ಕೋಟಿಗಳನ್ನಲ್ಲ. ಬದಲಿಗೆ ಕೇವಲ 39.1 ಲಕ್ಷ ಕೋಟಿಗಳನ್ನು ಮಾತ್ರ.

ಅಂದರೆ ಕರ್ನಾಟಕದಂಥ ರಾಜ್ಯಗಳಿಗೆ ಮೋದಿ ಸರ್ಕಾರ ಮುಂದಿನ ಐದು ವರ್ಷಗಳಲ್ಲಿ 55-39.1=15 ಲಕ್ಷ ಕೋಟಿಗಳಷ್ಟು ಪಂಗನಾಮ ಹಾಕುತ್ತಿದೆ.

ಅದರಲ್ಲಿ ಕರ್ನಾಟಕದ ಪಾಲು ಶೇ. 4.71 ರಿಂದ 3.64 ಕ್ಕೆ ಇಳಿದಿರುವುದರಿಂದ ಮುಂದಿನ ಐದು ವರ್ಷಗಳಲ್ಲಿ ಕರ್ನಾಟಕಕ್ಕೆ ದಕ್ಕುವುದು ಕೇವಲ 1.42 ಲಕ್ಷ ಕೋಟಿಗಳು ಮಾತ್ರ.

ಅಂದರೆ ವರ್ಷಕ್ಕೆ ಕೇವಲ 28000 ಕೋಟಿಗಳು ಮಾತ್ರ.

ಸೆಸ್ ದ್ರೋಹ ಮತ್ತು ಹಣಕಸು ಅಯೋಗದ ವಂಚನೆ ಇಲ್ಲದಿದ್ದರೆ ಕೇಂದ್ರದ ತೆರಿಗೆಯಲ್ಲಿ ಕರ್ನಾಟಕಕ್ಕೆ ಪ್ರತಿವರ್ಷ 51,000 ಕೋಟಿ ಸಿಗಬೇಕಿತ್ತು. ಈಗ ಸಿಗುತ್ತಿರುವುದು ಕೇವಲ 28,000 ಕೋಟಿ

ಅಂದರೆ ಪ್ರತಿವರ್ಷ ನಿವ್ವಳ 51,000-28,000=23,000 ಕೋಟಿ ವಂಚನೆ. ಹಗಲು ದರೋಡೆ..

ಇದು ಮೋದಿ ಸರ್ಕಾರ ಕರ್ನಾಟಕಕ್ಕೇ ಮಾಡುತ್ತಿರುವ ವಂಚನೆ . ಇದಲ್ಲದೆ ಕೊಡಬೇಕಿರುವುದನ್ನು ಕೊಡದೆ ಸತಾಯಿಸುವುದು ಮತ್ತೊಂದು ರೀತಿಯ ಕಿರುಕುಳ….

ಕಾಂಗ್ರೆಸ್ ಬದಲಿಸಿಕೊಳ್ಳುವುದೇ ನೀತಿ?

ಹಾಗೆಂದು ಕಾಂಗ್ರೆಸ್ ನೇತೃತ್ವದ UPA ಸರ್ಕಾರದ ರೆಕಾರ್ಡ್ ಕೂಡ ಅನುಕರಣೀಯವೇನು ಆಗಿರಲಿಲ್ಲ.

ಉದಾಹರಣೆಗೆ ಮೋದಿ ಸರ್ಕಾರ ಕೇಂದ್ರದ ತೆರಿಗೆಗಳಲ್ಲಿ ಶೇ. 42ರಷ್ಟು ರಾಜ್ಯಗಳಿಗೆ ಹಂಚಲಾಗುವುದು ಎಂದು ಸುಳ್ಳು ಭರವಸೆಯನ್ನು ಕೊಟ್ಟು ಸರಾಸರಿ ಶೇ. 35 ಕೊಡುತ್ತಿದೆ. ಕೆಲವು ವರ್ಷ ಅದು ಶೇ. 29ಕ್ಕಿಳಿದಿದೆ.

ಆದರೆ ಯುಪಿಎ ಸರ್ಕಾರದ ಕಾಲದಲ್ಲೂ ರಾಜ್ಯಗಳ ಪಾಲು ಶೇ. 32ಕ್ಕಿಂತ ಹೆಚ್ಚಾಗಿರಲೇ ಇಲ್ಲ .

ಸೆಸ್ ಮತ್ತು ಸರ್ಚಾರ್ಜ್ ಗಳಲ್ಲಿ ರಾಜ್ಯಗಳಿಗೆ ಪಾಲಿಲ್ಲ ಎಂಬ ಫೆಡರಲ ವಿರೋಧಿ ಸಂವಿಧಾನ ತಿದ್ದುಪಡಿ ವಾಜಪೇಯಿ ಕಾಲದಲ್ಲಿ ಆಗಿತ್ತು.

ಆದರೆ 2004-14 ರ ಅವಧಿಯಲ್ಲಿ ಯುಪಿಎ ಸರ್ಕಾರವೇ ಅಧಿಕಾರದಲ್ಲಿದ್ದರೂ ಈ ಅನ್ಯಾಯಯುತ ಫೆಡರಲ್ ವಿರೋಧಿ ಕಾನೂನನ್ನು ಬದಲಾಯಿಸಲಿಲ್ಲ.

ಇದರ ನಡುವೆಯೂ ಕೇರಳ ಸರ್ಕಾರ ಪ್ರವಾಹ ಪರಿಹಾರಕ್ಕೆ ಸೆಸ್ ಹಾಕಿತ್ತು.

ಇದೆ ರೀತಿ ಒರಿಸ್ಸಾ ಸರ್ಕಾರ ಹಾಕಿದ್ದ ಸೆಸ್ ಬಗ್ಗೆ ಪ್ರಕರಣವೊಂದು ಮುಂದುವರೆದು…ರಾಜ್ಯಗಳಿಗೆ ಸೆಸ್ ಹಾಕುವ ಅಧಿಕಾರವಿದೆಯೇ ಎಂಬ ವಿಷಯ ಈಗ ಸುಪ್ರೀಂಕೋರ್ಟಿನ ಒಂಭತ್ತು ಸದಸ್ಯರ ಪೀಠದ ಮುಂದಿದೆ.

ಹೀಗೆ ಒಟ್ಟಾರೆಯಾಗಿ ಮೋದಿ ಸರ್ಕಾರ ಕರ್ನಾಟಕದ ಮೇಲೆ ದ್ವೆಷ ಸಾಧಿಸುತ್ತಿದೆ.

ಪರಮ ಅನ್ಯಾಯ ಮತ್ತು ತಾರತಮ್ಯ ಮಾಡುತ್ತಿದೆ.

ಆದ್ದರಿಂದ ಈ ಬಾರಿಯ ಚುನಾವಣೆಯಲ್ಲಿ ಕರ್ನಾಟಕ ಮೋದಿಯ ಬಿಜೆಪಿಗೆ ಓಟು ಹಾಕಿದರೆ ಮಹಾ ಅತ್ಮವಂಚನೆಯೇ ಅದೀತು.

ಹೀಗಾಗಿ ಕರ್ನಾಟಕ ತನಗಾಗುತ್ತಿರುವ ದ್ರೋಹವನ್ನು ತಡೆಗಟ್ಟಬೇಕೆಂದರೆ ಬಿಜೆಪಿಯನ್ನು ಸೋಲಿಸುವುದು ಮೊದಲ ಹೆಜ್ಜೆ.

ಅದನ್ನ ಕರ್ನಾಟಕ ಮಾಡಲೇ ಬೇಕು.

ಆದರೆ ಅಷ್ಟರಿಂದಲೇ ಕರ್ನಾಟಕಕ್ಕೆ ಆಗುವ ಅನ್ಯಾಯ ನಿಲ್ಲವುದಿಲ್ಲ.

ಒಂದು ವೇಳೆ ಮುಂದೆಯೂ ಬಿಜೆಪಿ ಸರ್ಕಾರವೇ ಅಧಿಕಾರಕ್ಕೆ ಬಂದರೂ ಅಥವಾ ಬೇರೆ ಸರ್ಕಾರ ಸರ್ಕಾರ ಅಧಿಕಾರಕ್ಕೆ ಬಂದರೂ ಈ ಕೆಳಗನ ಆಗ್ರಹಗಳನ್ನು ಮುಡಿಟ್ಟುಕೊಂಡು ಜನಾಂದೋಲವನ್ನು ಕಟ್ಟಲೇ ಬೇಕು :

ಕರ್ನಾಟಕ ಜನತೆಯ ಆಗ್ರಹಗಳು ಇವಾಗಬೇಕು

– ಶೇ. 67 ರಷ್ಟು ವೆಚ್ಚ ಗಳ ಜವಾಬ್ದಾರಿ ಹೊಂದಿರುವ ರಾಜ್ಯಗಳಿಗೆ ಶೇ. 67 ರಷ್ಟು ತೆರಿಗೆ ಪಾಲು ಸಿಗಬೇಕು

– ಸೆಸ್ ಹಾಕುವ ಅಧಿಕಾರ ರಾಜ್ಯ ಸರ್ಕಾರಗಳಿಗೂ ನೀಡುವಂತೆ ಕಾನೂನು ತಿದ್ದುಪಡಿ ಮಾಡಬೇಕು.

– ಕೇವಲ ಐಷಾರಾಮಿ ಹಾಗೂ ವಿಲಾಸಿ ಸರಕು ಮತ್ತು ಸೇವೆಗಳಮೇಲೆ ಮಾತ್ರ ಸೆಸ್ ಹಾಕುವಂತೆ ಕಾನೂನು ತಿದ್ದುಪಡಿ ತರಬೇಕು.

– ಪೆಟ್ರೋಲ್ ಮತ್ತು ಡೀಸೆಲ್ ನಂಥ ಬೆಲೆ ಹಣದುಬ್ಬರ ಕಾರಕ ಸರಕುಗಳ ಮೇಲೆ ಸೆಸ್ ಮತ್ತು ಸರ್ ಚಾರ್ಜ್ ನಿಲ್ಲಿಸಬೇಕು.

– ರಾಜ್ಯಗಳಿಗೂ ಕೂಡ ಕಾರ್ಪೊರೇಟ್ ತೆರಿಗೆ ವಿಧಿಸುವ ಅಧಿಕಾರ ಒದಗಬೇಕು

– ಕೇಂದ್ರದ ದಿವಿಸಬಲ್ ಪೂಲ್ ನ ರಾಜ್ಯವಾರು ತೆರಿಗೆ ಹಂಚಿಕೆಯ ಸೂತ್ರವನ್ನು ಕೇಂದ್ರದ ಕ್ಯಾಬಿನೆಟ್ ತೀರ್ಮಾನ ಮಾಡದೆ ರಾಜ್ಯ ಸರ್ಕಾರಗಳ ಸಮಾಲೋಚನೆಯೊಂದಿಗೆ ನಿಗದಿಯಾಗಬೇಕು.

– GST ವ್ಯವಸ್ಥೆ ಮಾರ್ಪಾಡಾಗಬೇಕು.

– ದೇಶದ ಒಟ್ಟಾರೆ ತೆರಿಗೆ ಆದಾಯದಲ್ಲಿ ಜಿಎಸ್ಟಿ ಪಾಲು ಕಡಿಮೆಯಾಗುತ್ತಾ ಅತಿ ಶ್ರೀಮಂತ, ಶ್ರೀಮಂತ , ಮೇಲ್ಮಧ್ಯಮವರ್ಗಗಳ ಮೇಲೆ ವಿಧಿಸುವ ತೆರಿಗೆ ಆದಾಯಗಳು ಹೆಚ್ಚಾಗಬೇಕು

ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ದರೋಡೆಯನ್ನು ವಿರೋಧಿಸುತ್ತಲೇ…

ಕಾಂಗ್ರೆಸ್ ಆಗಲೀ ಅಥವಾ ಇತರ ವಿರೋಧ ಪಕ್ಷಗಳಾಗಲೀ ಈ ಮೇಲಿನ ಆಗ್ರಹಗಳನ್ನು ಒಪ್ಪಿಕೊಳ್ಳುವಂತೆ ಮಾಡಿದರೆ ಮಾತ್ರ ಕರ್ನಾಟಕಕ್ಕೇ ನ್ಯಾಯ ಸಿಗುತ್ತದೆ.

ಅಲ್ಲವೇ?

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!