ಮದ್ದೂರು ತಾಲ್ಲೂಕಿನ ಕುದುರಗುಂಡಿ ಗ್ರಾಮದಲ್ಲಿ ವೈದ್ಯರೊಬ್ಬರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಕುದುರಗುಂಡಿ ಗ್ರಾಮದ ತಂಗಿಯ ಮನೆಗೆ ಬಂದಿದ್ದ ಡಾ.ವೇಣುಗೋಪಾಲ್ ಎಂಬುವರು ತಮ್ಮ ಬೆಲ್ಟ್ ಅನ್ನು ಬಳಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಂಡ್ಯ ನಗರ ಸ್ಯಾಂಜೋ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಡಾ.ವೇಣುಗೋಪಾಲ್ ಕಾರ್ಯನಿಮಿತ್ತ ತಮ್ಮ ಸಹೋದರಿಯ ಮನೆಗೆ ತೆರಳಿದ್ದಾಗ ಈ ಘಟನೆ ಜರುಗಿದೆ. ಡಾ.ವೇಣುಗೋಪಾಲ್ ಅವರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆಂದು ತಿಳಿದು ಬಂದಿದೆ.
ತಂಗಿಯ ಅಗಲಿಕೆಯಿಂದ ಮನನೊಂದು ಆತ್ಮಹತ್ಯೆ
ಒಂದು ವರ್ಷದ ಹಿಂದೆ ಅವರ ತಂಗಿ ಗಾಯತ್ರಿ ಹೃದಯಾಘಾತದಿಂದ ಮೃತಪಟ್ಟಿದ್ದರು. ಮೂರು ದಿನಗಳ ಹಿಂದೆ ಗಾಯತ್ರಿ ಸಾವಿನ ವರ್ಷದ ತಿಥಿ ಕಾರ್ಯ ನಡೆಸಲಾಗಿತ್ತು. ಬಳಿಕ, ತಂಗಿಯನ್ನು ಮತ್ತೆ ಮತ್ತೆ ನೆನೆದು ಅಳುತ್ತಿದ್ದ ವೇಣುಗೋಪಾಲ್ ಗುರುವಾರ ಸಂಜೆ ತಮ್ಮ ಗದ್ದೆಯ ಬಳಿ, ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಮದ್ದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಶವವನ್ನು ಮದ್ದೂರು ತಾಲ್ಲೂಕು ಆಸ್ಪತ್ರೆಯಲ್ಲಿ ಇಡಲಾಗಿದೆ.