ಮಂಡ್ಯ ತಾಲ್ಲೂಕಿನ ಕಸಬಾ ಹೋಬಳಿಯ ಪಣಕನಹಳ್ಳಿ ಗ್ರಾಮದ ಶ್ರೀ ಭೈರವೇಶ್ವರ ಸ್ವಾಮಿ ಬಸಪ್ಪನ ರಥಕ್ಕೆ ಹಾಗೂ ಜೀರ್ಣೋದ್ಧಾರ ಸಮಿತಿಗೆ ಶ್ರೀ ಶಂಭು ಸೇವಾ ಟ್ರಸ್ಟ್ ಮತ್ತು ಮನ್ಮುಲ್ ಅಧ್ಯಕ್ಷ ಬಿ.ಆರ್. ರಾಮಚಂದ್ರು ಸಹಾಯಾರ್ಥವಾಗಿ 50,000(ಐವತ್ತು ಸಾವಿರ)ರೂ.ಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು,ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯವರ ಕೋರಿಕೆಯಂತೆ ನನ್ನ ಕೈಲಾದ ಅಳಿಲು ಸೇವೆ ಮಾಡಿದ್ದೇನೆ.ದೇವರು ಎಲ್ಲರಿಗೂ ಒಳಿತು ಮಾಡಲಿ ಎಂದರು.
ಈ ಸಂದರ್ಭದಲ್ಲಿ ಬೊಮ್ಮೇಗೌಡ, ಆನಂದ್, ನಂದಿನಿ, ಉಮೇಶ್, ಶಂಕರ್, ಪ್ರದೀಪ್, ಲೋಕೇಶ್, ಸಾಗರ್ ಹಾಗೂ ಊರಿನ ಗ್ರಾಮಸ್ಥರು ಮತ್ತಿತರರು ಉಪಸ್ಥಿತರಿದ್ದರು.
ಹಾಗೆಯೇ ಮಂಡ್ಯ ತಾಲ್ಲೂಕಿನ ಬಸರಾಳು ಹೋಬಳಿಯ ಜಿ.ಹೊಸಹಳ್ಳಿ ಕೊಪ್ಪಲು ಗ್ರಾಮದ ಶ್ರೀ ಮಸಣಕಮ್ಮ ದೇವಸ್ಥಾನ ಜೀರ್ಣೋದ್ಧಾರ ಸಮಿತಿಗೂ ಬಿ.ಆರ್. ರಾಮಚಂದ್ರುರವರು ಸಹಾಯಾರ್ಥವಾಗಿ 50,000(ಐವತ್ತು ಸಾವಿರ)ರೂಗಳನ್ನು ನೀಡಿದರು.
ಈ ಸಂದರ್ಭದಲ್ಲಿ ರಾಜು, ಸ್ವಾಮಿ, ನಾಗರಾಜು, ನಾಗಣ್ಣ, ಸಿಂಗಯ್ಯ, ಚಿಕ್ಕ ಬೋರಯ್ಯ, ಸಂತೋಷ್ ಹಾಗೂ ಊರಿನ ಗ್ರಾಮಸ್ಥರು ಮತ್ತಿತರರು ಉಪಸ್ಥಿತರಿದ್ದರು.