ಮಂಡ್ಯ ತಾಲೂಕಿನ ಹೊಳಲು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಐದು ವರ್ಷಗಳ ಆಡಳಿತ ಮಂಡಳಿ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 11 ಜನ ಆಯ್ಕೆಯಾಗಿದ್ದಾರೆ.
13 ಮಂದಿ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 24 ಮಂದಿ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಈ ಪೈಕಿ 11 ಚುನಾಯಿತರಾದರೆ, ಓರ್ವ ಮಹಿಳೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸರ್ಕಾರದ ನಾಮನಿರ್ದೇಶನ ಸದಸ್ಯರೊಬ್ಬರು ಸೇರಿದಂತೆ ಒಟ್ಟಾರೆ 13 ಮಂದಿ ಸದಸ್ಯರಿದ್ದಾರೆ.
ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಎಚ್.ಬಿ. ಕೃಷ್ಣ, ಎಚ್.ಎನ್. ಚರಣ್, ಸಾವಿತ್ರಮ್ಮ, ಸಾಗರ, ಎಚ್.ಎಸ್. ಶಿವರಾಂ, ಎಚ್.ಎಲ್. ನಿಂಗರಾಜು, ಲಲಿತಮ್ಮ, ಭಾಗ್ಯ, ಅನುರಾಧ, ದೊಡ್ಡಸಿದ್ದಯ್ಯ, ಅನಸೂಯ, ಕವಿತಾ, ಎಚ್.ಬಿ. ಸುರೇಶ್ ಅವರುಗಳು ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಆಶಾ ಘೋಷಿಸಿದ್ದಾರೆ.
ಚುನಾಯಿತರಾದ ಎಲ್ಲ ನಿರ್ದೇಶಕರನ್ನು ಅಭಿನಂದಿಸಿದ ಸಂಘದ ಸಿಇಓ ಎಚ್.ಎನ್. ಶಿವಕುಮಾರ್ ಮಾತನಾಡಿ, ಡೈರಿಯ ಸರ್ವತೋಮುಖ ಅಭಿವೃದ್ಧಿಗೆ ಸಹಕಾರ ನೀಡಬೇಕು. ಎಲ್ಲ ಸದಸ್ಯರನ್ನೂ ಒಗ್ಗೂಡಿಸಿ ಕೊಂಡು ಸಂಘಕ್ಕೆ ಆರ್ಥಿಕವಾಗಿ ಶಕ್ತಿ ತುಂಬುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಮಾಜಿ ಶಾಸಕ ಎಚ್.ಬಿ. ರಾಮು, ಒಕ್ಕಲಿಗರ ಸಂಘದ ಮಾಜಿ ಉಪಾಧ್ಯಕ್ಷ ಎಚ್.ಎಲ್. ಶಿವಣ್ಣ, ಮುಖಂಡರಾದ ಎಚ್.ಡಿ. ರವಿ, ಜಟ್ಟಿ ಕುಮಾರ್, ಶ್ರೀಧರ್, ಯೋಗೇಶ್ಕುಮಾರ್, ಪಟೇಲ್ ರಾಮು, ಚೇತನ್, ಸದಾನಂದ, ಪ್ರದೀಪ್, ಸಂತೋಷ್ ಇತರರು ನೂತನ ನಿರ್ದೇಶಕರನ್ನು ಅಭಿನಂದಿಸಿದರು.