ಸ್ವಾಮಿ ವಿವೇಕಾನಂದರ ಜಯಂತೋತ್ಸವದ ಅಂಗವಾಗಿ ಮೈಸೂರಿನ ಮೇಟಗಹಳ್ಳಿ ಸಿಗ್ನಲ್ ಸಮೀಪದ ರಾಯಲ್ ಇನ್ ಹೋಟೆಲ್ ಮುಂಭಾಗದ ಪರಿವರ್ತನ ಬಿ ಸ್ಕೂಲ್ ಆವರಣದಲ್ಲಿ ಜ.13ರಂದು ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಶ್ರೀರಂಗನಾಯಕಿ ಸ್ತ್ರೀ ಸಮಾಜದ ಅಧ್ಯಕ್ಷೆ ಆಶಾಲತ ಪುಟ್ಟೇಗೌಡ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೋಟರಿ ಮಂಡ್ಯ ಹಾಗೂ ಮೈಸೂರು ಹಾಗೂ ಉದ್ಯೋಗಧಾತ ಸಂಸ್ಥೆ ಇವರ ಸಾರಥ್ಯದಲ್ಲಿ ನಡೆಯಲಿರುವ ಉದ್ಯೋಗ ಮೇಳದಲ್ಲಿ SSLC.PUC DIPLOMALITI BA B.COM, BSC, BBM, BBA, BCA, BE, MBA, MCA, MSC. M.COM ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಭಾಗವಹಿಸಬಹುದು.
ಸುಮಾರು 20 ಕಂಪನಿಗಳು ಮೇಳದಲ್ಲಿ ಪಾಲ್ಗೊಳ್ಳಲಿದ್ದು ಸುಮಾರು 600 ಹುದ್ದೆಗಳಿಗೆ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಿವೆ ಎಂದು ವಿವರಿಸಿದರು. ನಿರುದ್ಯೋಗಿ ಯುವಜನರು ಈ ಮೇಳದಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು. ಹೆಚ್ಚಿನ ಮಾಹಿತಿಗಾಗಿ ಮೊ. 8095679666 ಸಂಪರ್ಕಿಸಬಹುದು ಎಂದರು.
ಗೋಷ್ಠಿಯಲ್ಲಿ ನಿವೃತ್ತ ಸರ್ಕಾರಿ ನೌಕರೆ ಸರಸ್ವತಿ ಎನ್, ಉದ್ಯೋಗಧಾತ ಸಂಸ್ಥೆಯ ರುಕ್ಮಾಂಗದ, ಮಂಡ್ಯ ರೋಟರಿ ಸಂಸ್ಥೆಯ ಅಧ್ಯಕ್ಷೆ ಅನುಪಮಾ ಉಪಸ್ಥಿತರಿದ್ದರು.