✍️ ದಿವಾಕರ್.ಡಿ.ಮಂಡ್ಯ
ಮನವನೊದದೆ ಒಳಿತನರಿಯದೆ
ಕಡುಕಪ್ಪು ಕಲ್ಲಿನೆದುರಿಗೆ ಕರವ
ಪಿಡಿದು ಬೇಡುವ ಕಡು ಕೆಡುಕು
ಸ್ವಾರ್ಥ ಜಗದ ಮನಜನಿಗೆ ನಿಸ್ವಾರ್ಥದಿ ದೇವರೊಲಿಯುವನೆ?
ಮಡಿ ಮೈಲಿಗೆ ಸುಗಂಧಭರಿತ
ಶಿರದೊಳಗಿನ ಕಲ್ಮಷ ತೊಳೆಯದೆ
ಮನದೊಳಗಿನ ಮಲೀನವಳಿಯದೆ
ಎಷ್ಟು ಬೇಡಿದರೇನು ಮುಖವಾಡದ
ಬದುಕಿಗೆ ದೇವನೊಲಿಯುವನೇ?
ಹುಟ್ಟು ಸಾವು ಜಗದ ಮಡಿಲಿಗೆ
ಲಾಭ ನಷ್ಟ ಪ್ರತಿಗಳಿಗೆಯ ಲೆಕ್ಕಕೆ
ಮಾನವೀಯತೆನರಿಯದೆ ಮೆರೆವ
ನರಿಮನಸ್ಸಿನ ಮೂರ್ಖ ನರನಿಗೆ
ದೇವನೊಲಿಯುವನೇ?
ಅರಿತು ಬಾಳು ನೀ ಮೌಢ್ಯತೆಯ
ತೊರೆದು ಪೂಜೆ ಪುರಸ್ಕಾರ ಯಾಗ
ಯಜ್ಞಗಳ ಆಡಂಬರಗಳೆಲ್ಲವೂ
ಪೀಡೆಗಳೆಂದರಿ ಒಳಿತನರಸು ಜಗದ
ಸರ್ವರಿಗೂ ನಿನ್ನೊಳಗೂ ದೇವನಿರುವನು..!!
ಕರಗು ನೀ ಮರುಗು ನೀ ಹರಸು ನೀ
ಕೈ ಪಿಡಿ ನೀ ಬೆಂಕೆಂದು ಹಲಬುವರ
ನಿಟ್ಟುಸಿರಾಗು ಕಡುಕಷ್ಟಗಳ ಜಾಲಕೆ
ಮಾಯೆಯ ಮೋಡಿಯದುವೆ
ಮನಕೆ ದೇವನೊಲಿಯುವನು..!!