ಮದ್ದೂರು ತಾಲ್ಲೂಕಿನ ಟಿಎಪಿಸಿಎಂಎಸ್ ನಿರ್ದೇಶಕ, ಬಿಜೆಪಿ ಮುಖಂಡ ಚಂದ್ರ ನಾಯಕ ಸೇರಿದಂತೆ ಮಲ್ಲನಕುಪ್ಪೆ ಗ್ರಾ.ಪಂ.ವ್ಯಾಪ್ತಿಯ ಚಾಕನಕೆರೆ, ಗೊಲ್ಲರದೊಡ್ಡಿ ಗ್ರಾಮದ ಬಿಜೆಪಿ ಮುಖಂಡರು ಶಾಸಕ ಕೆ.ಎಂ.ಉದಯ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಇಂದು ಸೇರ್ಪಡೆಯಾದರು.
ಸ್ಥಳೀಯ ಮುಖಂಡ ರಾದ ಚಂದ್ರನಾಯಕ, ಶಿವಣ್ಣ, ತಿಮ್ಮಯ್ಯ ಅವರನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕದಲೂರು ರಾಮಕೃಷ್ಣ ಪಕ್ಷದ ಬಾವುಟ ನೀಡಿ ಪಕ್ಷಕ್ಕೆ ಬರಮಾಡಿ ಕೊಂಡರು..
ಈ ವೇಳೆ ಸ್ಥಳೀಯ ಮುಖಂಡ ರಾದ ಮನ್ಮುಲ್ ನಿರ್ದೆಶಕ ಹರೀಶ್ ನಾಗರಾಜು, ಕುಮಾರ್, ನಿವೃತ್ತ ಪೋಲೀಸ್ ಅಧಿಕಾರಿ ಪುಟ್ಟಸ್ವಾಮಿ, ನಿವೃತ್ತ ಉಪ ತಹಸೀಲ್ದಾರ್ ರಾಮು ಇತರಿದ್ದರು.