ಮಳವಳ್ಳಿ ತಾಲೂಕಿನ ಬಸವನಹಳ್ಳಿ ಅರಣ್ಯ ಪ್ರದೇಶದ ನೀರ್ ಹಳ್ಳ ಜಾಗದಲ್ಲಿ ಕಡವೆ ಮಾಂಸ ಮಾರಾಟ ಮಾಡುತ್ತಿದ್ದ ಓರ್ವ ಬಂಧಿಸಿರುವ ಹಲಗೂರು ಅರಣ್ಯಾಧಿಕಾರಿಗಳೀ ಉಳಿದ 4 ಆರೋಪಿಗಳಿಗೆ ಭಲೇ ಬೀಸಿದ್ದಾರೆ. ಹಲಗೂರು ಅರಣ್ಯ ಅಧಿಕಾರಿಗಳು.
ಶುಕ್ರವಾರ ಬೆಳಗಿನ ಜಾವದಲ್ಲಿ ಕಡವೇ ಮಾಂಸ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿಯನ್ನು ಪಡೆದುಕೊಂಡ ಅರಣ್ಯ ಅಧಿಕಾರಿಗಳು, ಪ್ರಕಾಶ್ ಎಂಬ ವ್ಯಕ್ತಿಯನ್ನು ಬಂಧಿಸಿದ್ದು ಉಳಿದ 4 ಆರೋಪಿಗಳಿಗೆ ಬಲೆ ಬೀಸಿದ್ದಾರೆ. ಆರೋಪಿಯಿಂದ ಕಡವೆ ಚರ್ಮ ಮತ್ತು ಮಾಂಸವನ್ನು ವಶಪಡಿಸಿಕೊಳ್ಳಲಾಗಿದೆ.
ಕಾರ್ಯಾಚರಣೆಯನ್ನು ಡಿ. ಸಿ. ಎಫ್ ಸುರೇಂದ್ರ ಮಾರ್ಗದರ್ಶನದಲ್ಲಿ ಎ. ಸಿ. ಎಫ್ ನಾಗೇಂದ್ರ ಪ್ರಸಾದ್, ವಲಯ ಅರಣ್ಯ ಅಧಿಕಾರಿ ರವಿ ಬುಜ್ಜು, ಉಪ ವಲಯ ಅರಣ್ಯ ಅಧಿಕಾರಿ ಪ್ರವೀಣ್, ಸಿಬ್ಬಂದಿಗಳಾದ ಪ್ರಕಾಶ್, ಶಿವಣ್ಣ, ಪಡಿಯಪ್ಪ ಸೇರಿದಂತೆ ಇತರರು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.