ತಾಳಿ ಬಗ್ಗೆ ಮಾತಾಡುವ ನರೇಂದ್ರ ಮೋದಿಯವರೇ ಅವರೇ, ನಿಮ್ಮ ಬಿಜೆಪಿ ಬೆಂಬಲಿತ ಎನ್.ಡಿ.ಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅದೆಷ್ಟು ಮಹಿಳೆಯರ ಮಾಂಗಲ್ಯಕ್ಕೆ ಕುತ್ತು ತಂದಿದ್ದಾರೆ ಎಂಬ ಲೆಕ್ಕ ಸಿಕ್ಕಿದೆಯೇ? ಎಂದು ಕಾಂಗ್ರೆಸ್ ಪಕ್ಷವು ಪ್ರಶ್ನಿಸಿದೆ.
ಮಹಿಳೆಯರ ಮಾಂಗಲ್ಯದ ಪಾವಿತ್ರ್ಯವನ್ನು ಬೀದಿ ಹರಾಜು ಹಾಕಿದ್ದು ನಿಮಗೆ ದೊಡ್ಡ ವಿಷಯ ಅನಿಸಲಿಲ್ಲವೇ? ಮಹಿಳೆಯರ ಮಾನ ಹರಾಜು ಹಾಕುವವರೇ ಮೋದಿ ಪರಿವಾರದವರಾಗಿದ್ದಾರೆಯೇ? ಎಂದು ವ್ಯಂಗ್ಯವಾಡಿದೆ.
ಹಾಸನದಲ್ಲಿ ಸಾವಿರಾರು ಮಹಿಳೆಯರ ಬದುಕು, ಗೌರವ ಮಣ್ಣುಪಾಲಾಗಿದೆ. ಕಂಡು ಕೇಳರಿಯದ ವಿಕೃತಿಯಿಂದ ಮಹಿಳೆಯರು ಸಂತ್ರಸ್ತರಾಗಿದ್ದಾರೆ. ಈಗ ಏಕೆ ಬಿಜೆಪಿಗರು ಮೌನವಹಿಸಿದ್ದಾರೆ? ಜೆ.ಪಿ ನಡ್ಡಾ, ಬೊಮ್ಮಾಯಿ , ಬಿ.ವೈ.ವಿಜಯೇಂದ್ರ, ಸಿ.ಟಿ.ರವಿ, ಶೋಭಾ ಹಾಗೂ ಬಿ.ಎಸ್. ಯಡಿಯೂರಪ್ಪ ಅವರೇ ಹಾಸನದ ಸಂತ್ರಸ್ತೆಯರ ಮನೆಗೆ ಭೇಟಿ ನೀಡುವುದು ಯಾವಾಗ? ಸಂತ್ರಸ್ತರಿಗೆ ಸಾಂತ್ವಾನ ಹೇಳುವುದು ಯಾವಾಗ? ಹಾಸನದಲ್ಲಿ ಪ್ರಜ್ವಲ್ ರೇವಣ್ಣನಿಂದ ಸಂತ್ರಸ್ತರಾದ ಮಹಿಳೆಯರ ಬದುಕು, ಗೌರವ ಮುಖ್ಯವಲ್ಲವೇ? ಎಂದು ಪ್ರಶ್ನೆ ಮಾಡಿದೆ.
ತಾಳಿ ಬಗ್ಗೆ ಮಾತಾಡುವ @narendramodi ಅವರೇ,
ನಿಮ್ಮ ಬಿಜೆಪಿ ಬೆಂಬಲಿತ NDA ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅದೆಷ್ಟು ಮಹಿಳೆಯರ ಮಾಂಗಲ್ಯಕ್ಕೆ ಕುತ್ತು ತಂದಿದ್ದಾರೆ ಎಂಬ ಲೆಕ್ಕ ಸಿಕ್ಕಿದೆಯೇ?ಮಹಿಳೆಯರ ಮಾಂಗಲ್ಯದ ಪಾವಿತ್ರ್ಯವನ್ನು ಬೀದಿ ಹರಾಜು ಹಾಕಿದ್ದು ನಿಮಗೆ ದೊಡ್ಡ ವಿಷಯ ಅನಿಸಲಿಲ್ಲವೇ?
ಮಹಿಳೆಯರ ಮಾನ ಹರಾಜು ಹಾಕುವವರೇ ಮೋದಿ…
— Karnataka Congress (@INCKarnataka) April 28, 2024
“>
ಹಾಸನದ ಬಿಜೆಪಿ ಬೆಂಬಲಿತ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರು ನಡೆಸಿದ್ದಾರೆ ಎನ್ನಲಾದ ಭೀಕರ ಲೈಂಗಿಕ ದೌರ್ಜನ್ಯವನ್ನು ಖಂಡಿಸಿ, ಅವರನ್ನು ತಕ್ಷಣವೇ ಬಂದಿಸಿ ವಿಚಾರಣೆಗೆ ಒಳಪಡಿಸಬೇಕು ಎಂದು ಆಗ್ರಹಿಸಿ ಬೆಂಗಳೂರಿನ ನೃಪತುಂಗ ರಸ್ತೆಯ ಪೊಲೀಸ್ ಮಹಾ ನಿರ್ದೇಶಕರ ಕಚೇರಿ ಎದುರು ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಡಾ.ಪುಷ್ಪ ಅಮರನಾಥ್ ಹಾಗೂ ಮಾಜಿ ಮಹಾಪೌರರಾದ ಪದ್ಮಾವತಿ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.