Sunday, May 5, 2024

ಪ್ರಾಯೋಗಿಕ ಆವೃತ್ತಿ

ನಿರ್ಮಾಪಕ ವಿಜಯ್ ಕಿರಗಂದೂರು ಜನ್ಮದಿನ: ರೋಗಿಗಳಿಗೆ ಹಣ್ಣು-ಹಂಪಲು ವಿತರಣೆ

ಕೆಜಿಎಫ್ ಚಿತ್ರ ನಿರ್ಮಾಪಕ ವಿಜಯ್ ಕಿರಗಂದೂರು ಜನ್ಮದಿನದ ಅಂಗವಾಗಿ ಅವರ ಅಭಿಮಾನಿಗಳು ಮಂಡ್ಯದ ಮಿಮ್ಸ್ ಆಸ್ಪತ್ರೆಯ ಒಳ ರೋಗಿಗಳಿಗೆ ಹಣ್ಣು-ಹಂಪಲು ವಿತರಿಸಿದರು.

ಇಂದು ಬೆಳಿಗ್ಗೆ ಮಿಮ್ಸ್ ಆಸ್ಪತ್ರೆಗೆ ಬಂದ ವಿಜಯ್ ಕಿರಗಂದೂರು ಅಭಿಮಾನಿಗಳು ಹೆರಿಗೆ ವಿಭಾಗ ಸೇರಿದಂತೆ ಹಲವು ವಾರ್ಡ್ ಗಳಿಗೆ ತೆರಳಿ ಹಣ್ಣು-ಹಂಪಲು ವಿತರಿಸಿದರು. ನಂತರ ಮಮತೆಯ ಮಡಿಲು ಸಹಯೋಗದೊಂದಿಗೆ ಬೆಳಿಗ್ಗೆ ಉಪಹಾರ,ಮಧ್ಯಾಹ್ನ,ರಾತ್ರಿ ಊಟ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಅಭಿಮಾನಿ ಚೇತನ್ ಮಾತನಾಡಿ,ಮಂಡ್ಯದ ಕಿರಗಂದೂರು ವಿಜಯ್ ಕುಮಾರ್ ಅವರು ರಾಜ ಕುಮಾರ,ಕೆಜಿಎಫ್ ಚಿತ್ರಗಳನ್ನು ನಿರ್ಮಿಸುವ ಮೂಲಕ ಇಡೀ ವಿಶ್ವವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ್ದಾರೆ.ಕೊರೊನೊ ರೋಗದ ಸಂದರ್ಭದಲ್ಲಿ ಮಿಮ್ಸ್ ಆಸ್ಪತ್ರೆಗೆ ಆಕ್ಸಿಜನ್ ಘಟಕ ಹಾಗೂ ತುರ್ತು ಚಿಕಿತ್ಸಾ ಘಟಕ ನಿರ್ಮಿಸಿ ಕೊಟ್ಟಿದ್ದಾರೆ.ಅವರ ಸಾಮಾಜಿಕ ಸೇವೆ ಕಂಡು ನಾವೆಲ್ಲರೂ ಅಭಿಮಾನಿಗಳಾಗಿದ್ದೇವೆ ಎಂದರು.

ಕಿರಗಂದೂರು ವಿಜಯ್ ಕುಮಾರ್ ಅವರ ಅಭಿಮಾನಿಗಳಾದ ನಾವೆಲ್ಲಾ ಇಂದು ಪ್ರೀತಿಯಿಂದ ಅವರ ಜನ್ಮದಿನವನ್ನು ಮಿಮ್ಸ್ ಆಸ್ಪತ್ರೆಯ ಒಳ ರೋಗಿಗಳಿಗೆ ಹಣ್ಣು-ಹಂಪಲು ಹಾಗೂ ಉಪಹಾರ ವಿತರಿಸುವ ಮೂಲಕ ಆಚರಿಸಿದ್ದೇವೆ.ಅವರು ಚಿತ್ರರಂಗದಲ್ಲಿ ಮತ್ತಷ್ಟು ಸಾಧನೆ ಮಾಡಲು ದೇವರು ಆಯಸ್ಸು, ಆರೋಗ್ಯ ಕೊಡಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಮಿಮ್ಸ್ ಆಸ್ಪತ್ರೆಯ ಆರ್ ಸಿ ಎಚ್ ವಿಭಾಗದ ಡಾ.ಅನಿಲ್ ಗೌಡ,ಡಾ.ಸುದರ್ಶನ್,ಯುವ ಮುಖಂಡರಾದ ಹೇಮಂತ್,ಕುಮಾರ್, ಮಂಜು,ಮಂಗಲ ಯೋಗೇಶ್ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!