ವರದಿ : ಪ್ರಭು ವಿ. ಎಸ್.
ತಾಲ್ಲೂಕಿನ ವೈದ್ಯನಾಥಪುರ ಗ್ರಾಮದ ರತ್ನಮ್ಮ-ಸಿದ್ದಪ್ಪ ಅವರಿಗೆ ಸೇರಿದ ಮನೆಯಲ್ಲಿ 22ರ ಮಂಗಳವಾರ ಬೆಳಗ್ಗೆ 10:00 ವೇಳೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ನಾಡ ಹಂಚಿನಮನೆ ಬೆಂಕಿಗೆ ಅಹುತಿ ಘಟಿಸಿದೆ.
ರತ್ನಮ್ಮ ಅವರಿಗೆ ಇಬ್ಬರು ಗಂಡುಮಕ್ಕಳಿದ್ದು ಒಂದೆ ಮನೆಯಲ್ಲಿ ಬೇರೆಬೇರೆ ಆಗಿ ವಾಸಿಸುತ್ತಿದ್ದರು,
ಇಂದು ಬೆಳಗ್ಗೆ ಎಂದಿನಂತೆ ಕೆಲಸಕ್ಕೆ ಹೋಗಿದ್ದಾಗ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಫ್ರೀಡ್ಜ್ ಹತ್ತಿಕೊಂಡು ಉರಿದ್ದಿದೆ ಮನೆಯ ಶೇಕಡ 70 ರಷ್ಟು ಬೆಂಕಿಯ ಕೆನ್ನಾಲೆಗೆ ನಾಶವಾಗಿದ್ದು, ಮನೆಯಲ್ಲಿ ಬೇರೆಬೇರೆ ಆಗಿ ವಾಸಿಸುತ್ತಿದ್ದರಿಂದ ಎರಡು ಟಿವಿ, ಎರಡು ಫ್ರೀಡ್ಜ್ ಸೇರಿದಂತೆ ಎಲೆಕ್ಟ್ರಾನಿಕ್ ವಸ್ತುಗಳು, ಧವಸ ಧಾನ್ಯ, ಪೀಠೋಪಕರಣಗಳು, ವಸ್ರ್ತಗಳು ಸೇರಿದಂತೆ ಪಾತ್ರೆ ಪಾಗಡೆಗಳು ಸಂಪೂರ್ಣವಾಗಿ ನಾಶಾವಾಗಿದ್ದು ಸುಮಾರು 10 ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿದೆ.
ಗ್ರಾಮಸ್ಥರು ಬೆಂಕಿ ಹೊಗೆ ಕಾಣಿಸಿದ ವೇಳೆ ನಂದಿಸುವ ಪ್ರಯತ್ನ ವಿಫಲವಾಗಿದೆ ಕೂಡಲೆ ಅಗ್ನಿಶಾಮಕ ದಳದವರು ಬಂದು ಅಗ್ನಿ ನಂದಿಸಿದರು ಸಹ ಬೇಸಿಗೆ ಬಿಸಿಲಿಗೆ ಬಹುತೇಕ ಸುಟ್ಟು ಕರಕಲಾಗಿದೆ.
ರತ್ನಮ್ಮ ಅವರ ಪುತ್ರ ಶ್ಯಾಮ್ ಮದ್ದೂರು ಪೋಲೀಸ್ ಠಾಣೆಯಲ್ಲಿ ಅಗ್ನಿ ಅವಘಡ ಸಂಬಂಧ ದೂರು ದಾಖಲಿಸಿದ್ದಾರೆ.
ಅಗ್ನಿಶಾಮಕ ದಳದ ಪ್ರಭಾರ ಠಾಣಾಧಿಕಾರಿ ಶಿವಾನಂದಯ್ಯ, ಸಿಬ್ಬಂದಿಗಳಾದ ವೆಂಕಟೇಶ, ಅಭಿನಂದನ್, ಉತ್ತಮ ಮಾರುತಿ, ಮತ್ತು ಗ್ರಾಮಸ್ಥರು ಬೆಂಕಿ ನಂದಿಸುವಲ್ಲಿ ಪ್ರಮುಖ ಪಾತ್ರವಹಿಸಿದರು.