ನಾಗಮಂಗಲ: ತಾಲೂಕಿನ ಇಜ್ಜಲಘಟ್ಟ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ರಾಮಕೃಷ್ಣೇಗೌಡ ಎಂಬುವವರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ರಾಮಕೃಷ್ಣೇಗೌಡ 57 ವರ್ಷದ ಇವರು ಇತ್ತೀಚೆಗೆ ಪದೋನ್ನತಿ ಪಡೆದು ಇಜ್ಜಲಘಟ್ಟ ಪ್ರಾಥಮಿಕ ಶಾಲೆಗೆ ಮುಖ್ಯೋಪಾಧ್ಯಾಯರಾಗಿ ವರ್ಗಾವಣೆಯಾಗಿ ಬಂದಿದ್ದರು.
ಶಾಲಾ ಕರ್ತವ್ಯ ಮುಗಿಸಿ ಹಿಂದಿರುಗುವಾಗ ಸ್ಕೂಟರ್ ಕಾರು ನಡುವೆ ಡಿಕ್ಕಿ ಸಂಭವಿಸಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ರಾಮಕೃಷ್ಣೇಗೌಡರ ಸಾವಿಗೆ ತಾಲೂಕು ಶಿಕ್ಷಕ ವೃಂದ ಸಂತಾಪ ವ್ಯಕ್ತಪಡಿಸಿದೆ.