ನವದೆಹಲಿಯ ಅಮೃತವಾಟಿಕಾದಲ್ಲಿ ನಿರ್ಮಾಣ ಮಾಡುತ್ತಿರುವ ಉದ್ಯಾನವನ ನಿರ್ಮಾಣಕ್ಕಾಗಿ ಮಣ್ಣು ಸಂಗ್ರಹಿಸುವ ಅಭಿಯಾನಕ್ಕೆ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಡಾ.ಸದಾನಂದಗೌಡ ಮಂಗಳವಾರ ಚಾಲನೆ ನೀಡಿದರು.
ಮಂಡ್ಯ ನಗರದ ರಾಘವೇಂದ್ರ ದೇವಸ್ಥಾನದಲ್ಲಿ ಬಿಜಿಪಿ ಮುಖಂಡರು ಹಾಗೂ ಕಾರ್ಯಕರ್ತರು ಮಡಿಕೆ ಇಟ್ಟು ಪೂಜೆ ಸಲ್ಲಿಸಿ, ಮನೆ ಮನೆಗಳಿಗೆ ತೆರಳಿ ಮಣ್ಣು ಸಂಗ್ರಹಿಸುವ ಕಾರ್ಯಕ್ಕೆ ಮುಂದಾದರು.
ಈ ಸಂದರ್ಭದಲ್ಲಿ ಡಾ.ಸದಾನಂದಗೌಡ ಮಾತನಾಡಿ , ಪಕ್ಷದ ನಾಯಕರ ಸೂಚನೆಯ ಮೇರೆಗೆ ಜಿಲ್ಲೆಯಲ್ಲಿ ಅಭಿಯಾನವನ್ನು ಜಿಲ್ಲೆಯಲ್ಲಿ ಆರಂಭಿಸಿದ್ದು, ಬೂತ್ ಮಟ್ಟದಲ್ಲಿ ಸಂಗ್ರಹಿಸುವ ಮಣ್ಣನ್ನು, ಬೆಂಗಳೂರಿಗೆ ಕಳುಹಿಸಲಾಗುವುದು. ಅಲ್ಲಿಂದ ನವದೆಹಲಿಗೆ ಕಳುಹಿಸಲಿದ್ದು, ಕರ್ತವ್ಯ ಪಥದಲ್ಲಿ ನಿರ್ಮಿಸಿರುವ ಅಮೃತ ಉದ್ಯಾನದಲ್ಲಿ ಸಮರ್ಪಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ವಿವೇಕ್ , ಸಿ.ಟಿ ಮಂಜುನಾಥ್, ಶಿವಕುಮಾರ್, ಸಿದ್ದರಾಜು ಗೌಡ ,ಶಿವಕುಮಾರ್ ಆರಾಧ್ಯ ,ಚಂದ್ರು ಮತ್ತಿತರರಿದ್ದರು.