ಮಂಡ್ಯ ಸಮೀಪದ ಮನುಗನಹಳ್ಳಿಯ ನ್ಯಾಯಾಂಗ ಬಡಾವಣೆಯಲ್ಲಿ ನ್ಯಾಯಾಂಗ ಇಲಾಖೆ ಹಾಗೂ ವಕೀಲರ ಸಂಘದ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಅಚರಿಸಲಾಯಿತು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ಬಿ.ಜಿ.ರಮಾ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪರಿಸರ ಉಳಿಸಲು ಪ್ರತಿಯೊಬ್ಬರು ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸೋಣ ಎಂದರು. ಕಾರ್ಯಕ್ರಮಕ್ಕೆ ಕಾನೂನು ಸೇವೆಗಳ ಪ್ರಾಧಿಕಾರ, ಅರಣ್ಯ ಇಲಾಖೆ ಸಹಯೋಗ ವಹಿಸಿದ್ದವು.
ನ್ಯಾಯಧೀಶರಾದ ಶೀಲಾ ಎನ್, ಕೃಷ್ಣಪ್ರಸಾದ್ ರಾವ್ ಕೆ, ನಿರ್ಮಲ ಕೆ, ಶಭಾನಾ ಬೇಗಂ ಎಲ್.ಲಾಡಖಾನ್, ನಾಗಜ್ಯೋತಿ ಕಿ.ವಿ, ವಿಜಯಕುಮಾರ್ ರೈ, ಎ.ಎಂ ನಳಿನಿಕುಮಾರಿ, ಹೇಮಾಶ್ರೀ ಡಿ, ವಿಶ್ವನಾಥ್ ಚನ್ನಬಸಪ್ಪ ಗೌಡರ್, ಶಂಕರ ರೆಡ್ಡಿ, ಪೂಜಾ ಶೆಟ್ಟಿ, ಚಂದ್ರಿಕ ಕೆ.ಟಿ, ವಜ್ರೇಶ್ ಹಾಗೂ ವಕೀಲರ ಸಂಘದ ಅಧ್ಯಕ್ಷ ಎಂ.ಟಿ ರಾಜೇಂದ್ರ, ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಖಜಾಂಚಿ ಡಿ.ಎಂ ಮಹೇಶ್ ಹಾಜರಿದ್ದರು