ಅಖಿಲ ಕರ್ನಾಟಕ ಅಂಬರೀಶ್ ಅಭಿಮಾನಿಗಳ ಸಂಘದ ವತಿಯಿಂದ ನ.24ರಂದು ಡಾ.ಎಂ.ಹೆಚ್ ಅಂಬರೀಶ್ ಅವರ 5ನೇ ವರ್ಷದ ಪುಣ್ಯಸ್ಮರಣೆ ಹಾಗೂ ಅಭಿಷೇಕ್ ಅಂಬರೀಶ್ ಅವರ ಬ್ಯಾಡ್ ಮ್ಯಾನರ್ಸ್ ಚಿತ್ರ ಬಿಡುಗಡೆ ಪ್ರಯುಕ್ತ ‘ಕನ್ನಡ ಹಬ್ಬ’ ಮೆರವಣಿಗೆ ಹಮ್ಮಿಕೊಳ್ಳಲಾಗುವುದು ಎಂದು ಸಂಘದ ಅಧ್ಯಕ್ಷ ಬೇಲೂರು ಸೋಮಶೇಖರ್ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 11 ಗಂಟೆಗೆ ಸಿಲ್ವರ್ ಜ್ಯೂಬಲಿ ಪಾರ್ಕ್ನಿಂದ ಸಂಜಯ ಚಿತ್ರಮಂದಿರದವರೆಗೆ ಅದ್ದೂರಿ ಮೆರವಣಿಗೆಯೊಂದಿಗೆ ಕನ್ನಡ ಹಬ್ಬ ಹಮ್ಮಿಕೊಳ್ಳಲಾಗಿದೆ. ಮೆರವಣಿಗೆಯಯಲ್ಲಿ ವಿವಿಧ ಕಲಾ ಪ್ರಕಾರದ ಕಲಾ ತಂಡಗಳು, ಸಿಂಗಾರ ಗೊಂಡ ಎತ್ತಿನಗಾಡಿಗಳು, ಆಟೋ ರಿಕ್ಷಾಗಳು, ತಾಯಿ ಭುವನೇಶ್ವರಿ ಭಾವಚಿತ್ರ, ಡಾ.ಎಂ.ಹೆಚ್ ಅಂಬರೀಶ್ ಹಾಗೂ ಬ್ಯಾಡ್ ಮ್ಯಾನರ್ಸ್ ಚಿತ್ರದ ಸ್ಟಾರ್ ಗಳೊಂದಿಗೆ ಪೂರ್ಣಕುಂಭ ಮೆರವಣಿಗೆ ನಡೆಸಲಾಗುವುದು ಎಂದರು.
ಮಂಡ್ಯನಗರದ ಸಂಜಯ ಚಿತ್ರಮಂದಿರವುಇಂದಿನಿಂದಲೇ ವಿದ್ಯುತ್ ದೀಪಲಂಕಾರದಿಂದ ಕಂಗೊಳಿಸಲಿದೆ ಅಭಿಷೇಕ್ ಅಂಬರೀಶ್ 63 ಅಡಿ ಕಟೌಟ್ಗೆ ಬೃಹತ್ ಪುಷ್ಪಮಾಲೆ ಅರ್ಪಿಸಲಾಗುವುದು, ಮಂಡ್ಯ ನಗರದ ವಿವಿಧ ಕಾಲೇಜುಗಳಲ್ಲಿ ಅಂಬರೀಶ್ ಕುರಿತು ವಾರ ಪೂರ್ತಿ ಚಿತ್ರಕಲಾ ಸ್ಪರ್ಧೆ ಹಮ್ಮಿಕೊಳ್ಳಲಾಗುವುದು ಎಂದರು.
ಬ್ಯಾಡ್ ಮ್ಯಾನರ್ಸ್ ಚಿತ್ರ ವೀಕ್ಷಕರಿಗೆ ವಿಶೇಷ ಬಹುಮಾನ ನೀಡಲಾಗುವುದು, ಚಲನಚಿತ್ರ ವೀಕ್ಷಣೆ ಮಾಡಿದ ನಂತರ ಟಿಕೆಟ್ ಹಿಂಭಾಗದಲ್ಲಿ ವೀಕ್ಷಕರು ಹೆಸರು ಮತ್ತು ವಿಳಾಸ ಮೊಬೈಲ್ ನಂಬರ್ ಬರೆದು ಲಕ್ಕಿ ಬಾಕ್ಸ್ಗೆ ಹಾಕಬೇಕು. ವಿಜೇತರನ್ನು ಲಕ್ಕಿ ಡ್ರಿಪ್ ಮೂಲಕ ಆಯ್ಕೆ ಮಾಡಿ, ಪ್ರತಿವಾರ 5 ಜನರಿಗೆ ಬಹುಮಾನ ನೀಡಲಾಗುವುದು. ಅಲ್ಲದೇ 24ರಂದು ಬೆಳಗಿನ ಪ್ರದರ್ಶನ ಮುಗಿದ ನಂತರ ಮಧ್ಯಾಹ್ನದ ಪ್ರದರ್ಶನ ಪ್ರಾರಂಭಗೊಳ್ಳುವ ಮುನ್ನ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ವಿವರಿಸಿದರು.
ಗೋಷ್ಠಿಯಲ್ಲಿ ಮುಖಂಡರಾದ ಹನಕೆರೆ ಶಶಿಕುಮಾರ್, ಅರವಿಂದ್, ಗಣೀಶ್, ಮಹೇಶ್ ಉಪಸ್ಥಿತರಿದ್ದರು.