ಮಂಡ್ಯದ ಅಶೋಕ ನಗರದ ಲಕ್ಷ್ಮಿ ಫಾರ್ಮಾದಲ್ಲಿ ವಿದ್ಯುತ್ ಅವಘಡ ಸಂಭವಿಸಿದ ಪರಿಣಾಮ ₹1.81 ಕೋಟಿ ಮೌಲ್ಯದ ಔಷಧಿ ಮತ್ತು ಪೀಠೋಪಕರಣಗಳು ಭಸ್ಮವಾಗಿರುವ ಘಟನೆ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಫಾರ್ಮಾದ ಮಾಲೀಕ ಎಂ.ಪಿ.ಲೋಕಾನಂದ ಅವರಿಗೆ ಸೇರಿದ ಮನೆಯ ಕಟ್ಟಡದಲ್ಲಿ ಈ ಘಟನೆ ನಡೆದಿದೆ. ಏತನ್ಮಧ್ಯೆ ಭಾನುವಾರ ರಾತ್ರಿ 11 ಗಂಟೆಯಲ್ಲಿ ವಿದ್ಯುತ್ ಟ್ರಾನ್ಸ್ಫಾರ್ಮರ್ ಸುಟ್ಟು ಹೋಗಿದೆ ಎಂದು ತಿಳಿದು ಬಂದಿದೆ.
ಬೆಂಕಿ ಅವಘಡ ನಡೆದ ಸಂದರ್ಭದಲ್ಲಿ ಅಗ್ನಿ ಶಾಮಕ ದಳದವರು ಆಗಮಿಸಿ ಬೆಂಕಿ ನಂದಿಸುವುದಲ್ಲದೇ ಬಾರಿ ಅನಾಹುತ ತಪ್ಪಿಸಿದ್ಧಾರೆ ಮಾಲೀಕ ಎಂ.ಪಿ.ಲೋಕಾನಂದ ತಿಳಿಸಿದ್ದಾರೆ. ಭಾನುವಾರ ರಾತ್ರಿ ಕಟ್ಟಡದಿಂದ ಹೊಗೆ ಬರುತ್ತಿರುವುದನ್ನು ನನ್ನ ಮಗ ಗಮನಿಸಿದ್ದಾನೆ. ಆನಂತರ ಅಗ್ನಿಶಾಮಕ ಠಾಣಗೆ ವಿಷಯ ಮುಟ್ಟಿಸಲಾಯಿತು. ನಂತರ ಬೆಂಕಿ ನಂದಿಸಿದ ಅವರು ಹೆಚ್ಚಿನ ಅನಾಹುತ ತಪ್ಪಿಸಿದರು ಎಂದು ತಿಳಿಸಿದ್ದಾರೆ.
ಮಂಡ್ಯ ನಗರದ ಪೂರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಮಾಹಿತಿ ಪಡೆದುಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.