ಹುಬ್ಬಳ್ಳಿಯ ನೇಹಾ ಹಿರೇಮಠ ಹತ್ಯೆ ಖಂಡಿಸಿ ಹಾಗೂ ನೀಚ ಫಯಾಜ್ಗೆ ಕಠಿಣ ಶಿಕ್ಷೆ ವಿಧಿಸಿ ಮಂಡ್ಯ ಜಿಲ್ಲಾ ಜೆಡಿಎಸ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಮಂಡ್ಯದ ಮಹಾವೀರ ಸರ್ಕಲ್ನಿಂದ ಹೊಸಹಳ್ಳಿ ಸರ್ಕಲ್ವರೆಗೆ ನೂರಾರು ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಭಾನುವಾರ ಪಂಜಿನ ಮೆರವಣಿಗೆ ನಡೆಸಿ ನೇಹಾ ಹತ್ಯೆ ಖಂಡಿಸಿದರು.
ಜೆಡಿಎಸ್ ಮುಖಂಡ ಬಿ.ಆರ್.ಸುರೇಶ್ ಮಾತನಾಡಿ, ಹುಬ್ಬಳ್ಳಿಯ ನೇಹಾ ಹೀರೇಮಠ ಅವರನ್ನು ಬರ್ಬರವಾಗಿ ಕೊಂಡೊಯ್ದ ಆರೋಪಿ ಫಯಾಜ್ ವಿರುದ್ಧ ಪ್ರಬಲ ಸಾಕ್ಷ್ಯಾಧಾರ ಕಲೆ ಹಾಕಿ ಗಲ್ಲು ಶಿಕ್ಷೆ ವಿಧಿಸಬೇಕು. ಗೃಹಮಂತ್ರಿ ಅವರು ಈ ಘಟನೆ ಎಂದು ಹೇಳಿದ್ದಾರೆ.ನಮ್ಮ ದೇಶದಲ್ಲಿ ಮಹಿಳೆಯರಿಗೆ ಪೂಜನೀಯ ಸ್ಥಾನವಿದೆ. ಆದರೆ ಗೃಹಮಂತ್ರಿಗಳ ಆಕಸ್ಮಿಕ ಘಟನೆ ಎಂದಿರುವುದು ಸರಿಯಲ್ಲ.ಅವರು ಗೌರವಯುತವಾಗಿ ಮಾತನಾಡಬೇಕು.
ಸಹೋದರಿ ನೇಹ ಕೊಲೆಗೆ ನ್ಯಾಯ ದೊರೆಯಬೇಕು. ಅಲ್ಲಿಯವರೆಗೂ ನಮ್ಮ ಪಕ್ಷ ಹೋರಾಟ ಮಾಡಲಿದೆ. ನೇಹಾ ಅವರ ಬಗ್ಗೆ ಹಗುರವಾಗಿ ಮಾತನಾಡಿರುವ ಕಾಂಗ್ರೆಸ್ ನಾಯಕರ ವರ್ತನೆ ಖಂಡನೀಯ ಎಂದರು
ನಗರಸಭಾ ಸದಸ್ಯರಾದ ನಾಗೇಶ್,ಅರುಣ್ ಕುಮಾರ್,ಮುಖಂಡರಾದ ಹೇಮಂತ್, ಅನಿಲ್ ಕುಮಾರ್ ಉಪಸ್ಥಿತರಿದ್ದರು.