ವರದಿ : ನ.ಲಿ.ಕೃಷ್ಣ. ಕೃಷಿಕರು
ಮಾರ್ಚ್ 25 ಮತ್ತು 26 ರಂದು ಮದ್ದೂರು ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ರಾಜ್ಯಮಟ್ಟದ ಹೊನಲು ಬೆಳಕಿನ ಥ್ರೋ ಬಾಲ್ ಪಂದ್ಯಾವಳಿಯನ್ನು ಆಯೋಜನೆ ಮಾಡಲಾಗಿದೆ ಎಂದು ಮಂಡ್ಯ ಜಿಲ್ಲಾ ಅಮೆಚೂರ್ ಥ್ರೋ ಬಾಲ್ ಅಸೋಸಿಯೇಷನ್ ಗೌರವಾಧ್ಯಕ್ಷ ರಾಘವ್ ತಿಳಿಸಿದರು.
ರಾಜ್ಯಮಟ್ಟದ ಥ್ರೋ ಬಾಲ್ ಪಂದ್ಯಾವಳಿ ಪೂರ್ವಭಾವಿ ಸಭೆ ಉದ್ದೇಶಿಸಿ ಮಾತನಾಡಿದ ಅವರು ಎರಡು ದಿನ ನಡೆಯುವ ಈ ಪಂದ್ಯಾವಳಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಮಹಿಳಾ ಮತ್ತು ಪುರುಷರ ಪ್ರತ್ಯೇಕ ತಂಡಗಳು ಆಗಮಿಸಲಿದ್ದು ಪಂದ್ಯಾವಳಿಗೆ ಆಗಮಿಸುವ ಕ್ರೀಡಾಪಟುಗಳಿಗೆ ಯಾವುದೇ ತೊಂದರೆ ಆಗದಂತೆ ಊಟ, ವಸತಿ ವ್ಯವಸ್ಥೆ ಹಾಗೂ ವಿವಿಧ ಮೂಲಭೂತ ಸೌಕರ್ಯಗಳನ್ನು ಒದಗಿಸಲು ವ್ಯವಸ್ಥೆ ಮಾಡಲಾಗಿದೆ ಎಂದರು.
ಈ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷರಾದ ಚನ್ನಸಂದ್ರ ಲಕ್ಷ್ಮಣ್ ಅಂತರಾಷ್ಟ್ರೀಯ ಥ್ರೋ ಬಾಲ್ ಕ್ರೀಡಾಪಟುಗಳಾದ ಪೂರ್ಣಚಂದ್ರ ಪ್ರವೀಣ್ ಗೌಡ ಸುಹಾಸ್ ರಾಮ್ ಲಾಲ್ ಕಾರ್ತಿಕ್ ನಿಖಿಲ್ ಗೌಡ ಮುಖಂಡರಾದ ನಿರಂಜನ್ ಲಕ್ಷ್ಮಣ್ ಮೋಹನ್ ಸೇರಿದಂತೆ ಅನೇಕ ಕ್ರೀಡಾಪಟುಗಳು ಉಪಸ್ಥಿತರಿದ್ದರು.