ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆ ನಡೆಯುವ ಸಂದರ್ಭದಲ್ಲಿ ನೀಡಿದ್ದ ಭರವಸೆಗಳಾದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಂಡ್ಯಕ್ಕೆ ತರಲಾಗುವುದು ಹಾಗೂ ಗೆದ್ದ ನಂತರ ಈ ಬಾರಿ ಶ್ರೀರಂಗಪಟ್ಟಣದಲ್ಲಿ ಜಿಲ್ಲಾ ಸಮ್ಮೇಳನವನ್ನು ನಡೆಸಲು ಅವಕಾಶ ಮಾಡಿಕೊಡಲಾಗುವುದು ಎಂದು ರವಿಕುಮಾರ ಚಾಮಲಾಪುರ ಹೇಳಿದ್ದರೂ, ಆದರೆ ಅವರು ಅಕಾಲಿಕವಾಗಿ ನಿಧನರಾಗಿದ್ದು ನೋವಿನ ಸಂಗತಿ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಜಿ. ಧನಂಜಯ ಧರಸಗುಪ್ಪೆ ಸ್ಮರಿಸಿದರು.
ಶ್ರೀರಂಗಪಟ್ಟಣ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಪಟ್ಟಣದ ಬಿ.ಎಂ.ಎಸ್ ಕಟ್ಟಡ ಕಾರ್ಮಿಕರ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಿ.ಕೆ. ರವಿಕುಮಾರ ಚಾಮಲಾಪುರವರ ಶ್ರದ್ಧಾಂಜಲಿ ಸಭೆಯಲ್ಲಿ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು, ಅಕಾಲಿಕ ಮರಣಕ್ಕೆ ತುತ್ತಾದ ಸಿ. ಕೆ. ರವಿಕುಮಾರ್ ಚಾಮಲಾಪುರ ಅವರಿಂದ ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿಗಲ್ಲದೆ ಜಿಲ್ಲೆಯ ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಎಂದರೆ ತಪ್ಪಾಗಲಾರದು. ಎರಡನೇ ಬಾರಿಗೆ ಚುನಾವಣೆ ಮೂಲಕ ಅತ್ಯಧಿಕ ಮತಗಳನ್ನು ಗಳಿಸಿ ಆಯ್ಕೆಯಾಗುವ ಮೂಲಕ, ಹಲವು ಪ್ರಥಮಗಳಿಗೆ ಕಾರಣರಾಗಿದ್ದರು ಎಂದರು.
ಇದೇ ಸಂದರ್ಭದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ. ಮಂಜುನಾಥ ಬಲ್ಲೇನಹಳ್ಳಿ ಸಿ. ಜೆ. ಶ್ರೀನಿವಾಸ್, ಪಾಲಹಳ್ಳಿ ಪೈ.ಮುಕುಂದ, ಗಣಂಗೂರು ನಂಜೇಗೌಡ, ಆಶಾಲತಾ ಪುಟ್ಟೇಗೌಡ, ಎನ್. ಸರಸ್ವತಿ, ಡಿ. ಎಂ. ಲೋಕೇಶ್,ಮೇಳಾಪುರ ಜಯರಾಮು, ಎ ಸಿ ಸಿ ಪ್ರಕಾಶ್,ಕೆ ಟಿ ರಂಗಪ್ಪ,ಅಪ್ಪಾಜಿ, ಪ್ರಿಯರಮೇಶ್ ಮಾತನಾಡಿದರು.
ಸಭೆಯಲ್ಲಿ ಹೋಬಳಿ ಘಟಕದ ಅಧ್ಯಕ್ಷರಾದ ಪಾಲಹಳ್ಳಿ ಶೇಖರ್, ಚಂದಗಾಲು ಶಂಕರ್, ದರಸಗುಪ್ಪೆ ಲೋಕೇಶ್, ಅರಕೆರೆ ಶಿವಸ್ವಾಮಿ, ಗಂಜಾಮ್ ಚಂದು, ಗಂಜಾಮ್ ಮಂಜುನಾಥ್, ಕೂಡಲಕುಪ್ಪೆ ಲೋಕೇಶ್, ಎಲ್ ಐ ಸಿ ವಾಸುದೇವ, ಪುರುಷೋತ್ತಮ್, ಕೊನಾಪು, ಪಿ ಸುರೇಶ್, ಬಸವರಾಜು, ನಾಗೇಂದ್ರ,ಎಂ ಸುರೇಶ್, ದೀಪು, ವಿವಿಧ ಸಂಘಟನೆಗಳ ಪದಾಧಿಕಾರಿಗಳು -ಸಾಹಿತ್ಯಸಕ್ತರು ನಾಗರಿಕರು ಉಪಸ್ಥಿತರಿದ್ದರು.