ಹೊಸ ವರ್ಷ ಬದಲಾಗು
ವರ್ಷಕ್ಕೊಮ್ಮೆ ಬರುವ ಹೊಸ ವರ್ಷ
ಹಳೆಯ ಕೊಳಕನ್ನು ಕಿತ್ತು ಹಾಕು
ನವ ಸಂವತ್ಸರ
ಜಡ ಮನಸಿಗೆ ಚೈತನ್ಯ ತುಂಬಲಿ
ದುಡಿವ ಜೀವಗಳಿಗೆ ಆನಂದ ಸಿಗುವಂತಾಗಲಿ…
ಜಾತಿ ಅಳಿಯುವ ಸಮಯ
ಸೃಷ್ಟಿಯಾಗಲಿ
ದ್ವೇಷ ಪ್ರೆಮವಾಗುವ ಸಮಯ
ಉದ್ಭವಿಸಲಿ
ಬೇಧ ಮರೆತು ಹೋಗುವ ಸಮಯ ಮೂಡಲಿ
ಧರ್ಮ ನೆತ್ತಿಗೆರುವ ಮುನ್ನ ಅಮೃತವಾಗಿ ಹರಿಯಲಿ
ಅದೇ ನವ ಸಂವತ್ಸರವಾಗಲಿ
ಬದುಕಿನ ಪಾಠಗಳು
ನೆನಪಿನ ಅಂಗಳದಲ್ಲಿ
ಹೊಸ ಚರಿತ್ರೆ ಬರೆಯಲಿ
ಬದುಕಬೇಕು
ಬಡವನೂ ಸಿರಿವಂತನು
ಸಂತೃಪ್ತಿಯಲ್ಲಿ
ಇಬ್ಬರಲ್ಲೂ ಚಿಗುರಲಿ ಪ್ರೇಮ
ಮತ್ತೊಬ್ಬನ ಕಣ್ಣೀರು ಇನ್ನೊಬ್ಬನ ನಗುವಾಗದಿರಲೆಂದು
ಆಳುವವನಿಗೂ ಸಾಮಾನ್ಯನಿಗೂ ಪ್ರೀತಿಯೇ ಆಧಾರ ಸ್ತಂಭವಾಗಿರಲಿ
ಗೌತಮನ ಕಾಲಚಕ್ರದಲಿ
ಪ್ರೇಮವೇ ಉಸಿರಾಗಿರಲಿ
ಹೃದಯದ ಹಾಡು ಸದಾ ಉತ್ಸಾಹದ ಚಿಲುಮೆ ಯಾಗಿರಲಿ
ಹೊಸ ಸಂತ್ಸರ ಎಲ್ಲರೆದೆಗೆ ಬೆಳಕಾಗಲಿ….
ನಾರಾಯಣ್ ಬೆಳಗುರ್ಕಿ
ಹೋರಾಟಗಾರರು
ಸಿಂಧನೂರು