ಕಾವೇರಿ ವರಪುತ್ರ ಕನ್ನಡ ಮಣ್ಣಿನ ಮಗ ಹೆಚ್.ಡಿ.ಕುಮಾರ ಸ್ವಾಮಿ ಅವರನ್ನು ಈ ಚುನಾವಣೆಯಲ್ಲಿ ಬಹು ಮತಗಳ ಅಂತರದಿಂದ ಗೆಲ್ಲಿಸಬೇಕು ನಿಖಿಲ್ ಕುಮಾರಸ್ವಾಮಿ ಮನವಿ ಮಾಡಿದರು.
ನಾಗಮಂಗಲ ತಾಲ್ಲೂಕಿನಲ್ಲಿ ಲೋಕಸಭಾ ಅಭ್ಯರ್ಥಿ ಹೆಚ್.ಡಿ.ಕುಮಾರ ಸ್ವಾಮಿ ಪರ ಚುನಾವಣಾ ಪ್ರಚಾರ ಮಾಡುತ್ತಿರುವ ನಿಖಿಲ್ ಕುಮಾರಸ್ವಾಮಿ ಬಿಂಡಿಗನವಿಲೇ ಹೋಬಳಿಗೆ ಆಗಮಿಸಿದ ಸಂದರ್ಭದಲ್ಲಿ ತಮಟೆ, ಪೂಜಾಕುಣಿತ, ವೀರಗಾಸೆ ಕಾರ್ಯಕ್ರಮಗಳೊಂದಿಗೆ ಅಭೂತ ಪೂರ್ವವಾಗಿ ಸ್ವಾಗತಿಸಿದರು.
ನಿಖಿಲ್ ಕುಮಾರಸ್ವಾಮಿ ಮಾತನಾಡಿ, ಕುಮಾರಸ್ವಾಮ ಯವರು ರಾಜ್ಯಕ್ಕೆ ಚಿರಪರಿಚಿತರು ಅವರನ್ನ ಪರಿಚಯ ಮಾಡಿಕೊಡುವ ಅವಶ್ಯಕತೆ ಇಲ್ಲ, ಕಾವೇರಿ ಸುಪುತ್ರ ಕನ್ನಡ ಮಣ್ಣಿನ ಮಗ ಅವರ ಪರವಾಗಿ ನಾನು ಮಂಡ್ಯ ಜಿಲ್ಲೆಯಾದ್ಯಂತ ಚುನಾವಣಾ ಪ್ರಚಾರ ಮಾಡುತ್ತ ಇದ್ದೇನೆ, ಇಂದು ಬಿಂಡಿಗನವಿಲೇ ಹೋಬಳಿಗೆ ಬಂದಿದ್ದೇನೆ. ಈ ಹೋಬಳಿ ಜೆಡಿಎಸ್ ನ ಭದ್ರಕೋಟೆ ಕಳೆದ ಚುನಾವಣೆಗಳಲ್ಲಿ ಅತೀ ಹೆಚ್ಚು ಬಹು ಮತಗಳನ್ನ ನಮ್ಮ ಪಕ್ಷಕ್ಕೆ ನೀಡಿದ್ದೀರಾ, ಅದು ಖುಷಿ ತಂದಿದೆ ಎಂದರು.
ನಮ್ಮ ಜನರ ರೈತರ ಉಳಿವಿಗಾಗಿ ಪ್ರಾದೇಶಿಕ ಪಕ್ಷವನ್ನ ಉಳಿಸಿ ಕೊಳ್ಳುವ ನಿಟ್ಟಿನಲ್ಲಿ ಇಂದು ಹೋರಾಟವನ್ನ ನಾವೆಲ್ಲರೂ ಒಟ್ಟಾಗಿ ಮಾಡಲೇಬೇಕು. ರಾಜ್ಯಕ್ಕೆ ಹಲವಾರು ಯೋಜನೆಗಳನ್ನ ಕುಮಾರಣ್ಣ ನೀಡಿದ್ದಾರೆ. ಹಾಗೇನೇ ಲಾಟರಿ, ಮದ್ಯ ನಿಷೇದ ವನ್ನು ಕೂಡ ಮಾಡುವ ಮೂಲಕ ರಾಜ್ಯದ ಜನೆತೆಗೆ ಒಳಿತನ್ನ ಮಾಡಿಕೊಂಡು ಬಂದಿದ್ದಾರೆ ಎಂದರು.
ಕಳೆದ ಚುನಾವಣೆಯಲ್ಲೂ ಕೂಡ ನನ್ನ ಸೋಲಿಗೆ ರಾಜಕೀಯ ಕುತಂತ್ರವೇ ಕಾರಣ, ಆದರೇ ಮಂಡ್ಯ ಜಿಲ್ಲೆಯ ಜನರು ಭಾವನಾತ್ಮಕ ಜೀವಿಗಳು ಅವರಿಗೆ ಸುಳ್ಳು ವಂಚನೆ ಗೊತ್ತಿಲ್ಲ ಈ ಬಾರಿಯ ಚುನಾವಣೆಯಲ್ಲಿ ಕುಮಾರ ಸ್ವಾಮಿಯವರನ್ನ ಹೆಚ್ಚಿನ ಬಹುಮತಗಳ ಅಂತರದಿಂದ ಗೆಲ್ಲಿಸಬೇಕು ಆದ್ದರಿಂದ ಎಲ್ಲರೂ ಒಗ್ಗಟ್ಟಿನಿಂದ ಚುನಾವಣೆ ನೆಡೆಸೋಣ ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಸುರೇಶ್ ಗೌಡ, ನೆಲ್ಲಿಗೆರೆ ಬಾಲು, ನರಸಿಂಹ ಮೂರ್ತಿ ಸೇರಿದಂತೆ ಜೆಡಿಎಸ್ ಕಾರ್ಯಕರ್ತರು ಉಪಸ್ಥಿತರಿದ್ದರು.