Monday, May 6, 2024

ಪ್ರಾಯೋಗಿಕ ಆವೃತ್ತಿ

ಮತ್ತಷ್ಟು ಒತ್ತಡ ಹೇರುತ್ತಿರುವ ವೈರಲ್ ಪೋಸ್ಟ್ ಗಳು

ಶಂಕರೇಗೌಡರು ಅರೋಗ್ಯವಾಗಿದ್ದಾರೆ 
- ಪತ್ನಿ ರುಕ್ಮಿಣಿಶಂಕರೇಗೌಡ

ಮಂಡ್ಯದ ಪ್ರಖ್ಯಾತ ವೈದ್ಯರಾಗಿರುವ ಶಂಕರೇಗೌಡರ ಆರೋಗ್ಯದ ಬಗೆಗೆ ಸಾಮಾಜಿಕ ಜಾಲತಾಣದಲ್ಲಿ  ಸುಳ್ಳು ಸುದ್ಧಿಯನ್ನು ಹರಡಲಾಗುತ್ತಿದೆ. ಇಂತಹ ಪೋಸ್ಟ್ ಗಳು ಕುಟುಂಬ ವರ್ಗದವರಿಗೆ ಹೆಚ್ಚು ಒತ್ತಡವನ್ನುಂಟು ಮಾಡಿದೆ.

ಡಾ.ಶಂಕರೇಗೌಡರ ಅವರ ಆರೋಗ್ಯ ಸ್ಥಿರವಾಗಿದ್ದು, ಮೈಸೂರಿನ ಅಪೊಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾ ಚೇತರಿಸಿಕೊಳ್ಳುತ್ತಿದ್ದಾರೆ. ಮಧ್ಯಹ್ನಾ ನಾನೇ ಅವರಿಗೆ ಊಟ ಮಾಡಿಸಿದ್ದೇನೆ. ಜನತೆ ಯಾವುದೇ ಆತಂಕ ಪಡಬೇಕಿಲ್ಲ. ಗಾಳಿ ಸುದ್ದಿಗಳಿಗೆ ಕಿವಿಗೊಡುವ ಆಗತ್ಯವಿಲ್ಲ ಎಂದು ಡಾ.ಶಂಕರೇಗೌಡರ ಪತ್ನಿ ರುಕ್ಮಿಣಿ ಶಂಕರೇಗೌಡ ತಿಳಿಸಿದ್ದಾರೆ.

ಇನ್ನೂ ಮಾಹಿತಿ ಇರುವ ಮಂದಿ ಅವರು ಆರೋಗ್ಯವಾಗಿದ್ದರೆಂದು ತಮ್ಮ ತಮ್ಮ ವಾಟ್ಸ್ ಪ್ ಸ್ಟೇಟಸ್ ಗಳಲ್ಲಿ ಹಾಕಿಕೊಂಡಿದ್ದಾರೆ.

ಜನತೆ ಇಂತಹ ಸಂದರ್ಭದಲ್ಲಿ ಸಾಮಾಜಿಕ ಜಾಲ ತಾಣದಲ್ಲಿ ಸುಳ್ಳು ಸುದ್ದಿಗಳನ್ನು ಹರಡದೇ, ಕುಟುಂಬದವರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು.

ಡಾ.ಶಂಕರೇಗೌಡರು ಬೇಗ ಗುಣಮುಖರಾಗಿ ಬರಲಿ ಎಂಬುದು ಎಲ್ಲರ ಆಶಯವಾಗಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!